ಉಪ್ಪಿನಂಗಡಿ: ಪಿಎಫ್ಐ ನಾಯಕರ ಬಂಧನವನ್ನು ಖಂಡಿಸಿ ಬೆಳಗ್ಗೆಯಿಂದ ನಡೆಯುತ್ತಿದ್ದ ಪ್ರತಿಭಟನೆ ಮುಂದುವರಿದಿದ್ದು, ಇದೀಗ ಪೊಲೀಸರು ಲಾಠಿಚಾರ್ಜ್ ಮಾಡುವ ಮೂಲಕ ಪ್ರತಿಭಟನಕಾರರನ್ನು ಚದುರಿಸುವ ಪ್ರಯತ್ನ ಮಾಡಿದ್ದಾರೆ.
![](http://dtvkannada.in/wp-content/uploads/2021/12/IMG-20211214-WA0045-1024x576.jpg)
ಸಂಜೆಯ ವೇಳೆಗೆ ಜಿಲ್ಲಾಧ್ಯಕ್ಷ ಹಮೀದ್ ಮೆಜೆಸ್ಟಿಕ್ ಅವರನ್ನು ಬಿಡುಗಡೆಗೊಳಿಸಿದ್ದರೂ, ಬಂಧನದಲ್ಲಿರುವ ಇನ್ನಿಬ್ಬರನ್ನು ಬಿಡುಗೊಡೆಗೊಳಿಸುವಂತೆ ಪಟ್ಟು ಹಿಡಿದು ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದರು. ಇದೀಗ ಪೋಲಿಸರು ಲಾಠಿಚಾರ್ಜ್ ನಡೆಸಿದ್ದಾರೆ.
ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೆಕ್ಷನ್ ಜಾರಿಯಾಗುವ ಸಾಧ್ಯತೆಯಿದೆ.