dtvkannada

ಪುತ್ತೂರು: ಪುತ್ತೂರು ತಾಲೂಕಿನ ಮಿತ್ತೂರು ಬಳಿಯಿರುವ ಕುಕ್ಕರೆಬೆಟ್ಟು ಪಾಟ್ರಕೋಡಿ ರಸ್ತೆಯು ಹಲವಾರು ವರ್ಷಗಳಿಂದ ಹದಗೆಟ್ಟಿದ್ದು ಈ ರಸ್ತೆಯ ನವ ನಿರ್ಮಾಣ ಸಮಿತಿಯ ಸದಸ್ಯರು ಪುತ್ತೂರು ಶಾಸಕರನ್ನು ಭೇಟಿಯಾಗಿ ಹದಗೆಟ್ಟ ರಸ್ತೆಯ ಕಾಮಗಾರಿಗಾಗಿ ಮನವಿ ಸಲ್ಲಿಸಿದರು.


ಸಮಿತಿಯ ಮನವಿಯನ್ನು ಸ್ವೀಕರಿಸಿದ ಶಾಸಕರು ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನವ ನಿರ್ಮಾಣ ಸಮಿತಿಯ ಅದ್ಯಕ್ಷರಾದ ಶ್ರೀ ಪಾದ್ ವಸಂತ ಭಟ್ ಸ್ಥಳೀಯ ಪಂಚಾಯತ್ ಸದಸ್ಯರಾದ ಹಬೀಬ್ ಮುಹ್ಸಿನ್,ಮುಖಂಡರಾದ ಇಬ್ರಾಹಿಂ ಮಿತ್ತಪಡ್ಪುರವರು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವರದಿ: ಅಬ್ದುಲ್ ಖಾದರ್ ಪಾಟ್ರಕೋಡಿ

By dtv

Leave a Reply

Your email address will not be published. Required fields are marked *

error: Content is protected !!