dtvkannada

ಆಲ್ದೂರು: ಅಪ್ಪನ ಜೊತೆ ಜಗಳವಾಡಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೋಕಾಲಿಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಚೇತನ್‌ (9) ಆತ್ಮಹತ್ಯೆ ಮಾಡಿಕೊಂಡ ಬಾಲಕ.

ಈತ ಆಲ್ದೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದ. ಗುರುವಾರ ತನ್ನ ಸ್ವಂತ ಊರು ಹಾವೇರಿ ಜಿಲ್ಲೆ ಶೇಷಗಿರಿ ಗ್ರಾಮಕ್ಕೆ ಜಾತ್ರೆಗಾಗಿ ಕುಟುಂಬದವರ ಜೊತೆ ತೆರಳಿದ್ದು ಶುಕ್ರವಾರ ತನ್ನ ಮನೆಯಲ್ಲಿ ತನ್ನ ಅಪ್ಪ ಗಣೇಶ್‌ ಅವರ ಜೊತೆ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿದ್ದ ಜೋಕಾಲಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚೇತನ್‌ ಅಪ್ಪ ಗಣೇಶ್‌ ಅಮ್ಮ ಶೋಭಾ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದು ತಮ್ಮ ಊರು ಹಾವೇರಿಯಿಂದ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮಕ್ಕೆ ಬಂದು ಇಲ್ಲಿ ಬಾಡಿಗೆ ಮನೆಯಲ್ಲಿ ತಮ್ಮಇಬ್ಬರು ಮಕ್ಕಳಾದ ಪುನೀತ್‌ ಹಾಗೂ ಚೇತನ್‌ ಜೊತೆ ವಾಸ ಮಾಡುತ್ತಿದ್ದರು.

ಶುಕ್ರವಾರ ಶೇಷಗಿರಿಯಲ್ಲಿ ಜಾತ್ರೆಯಿದ್ದಿದ್ದರಿಂದ ಮೃತದೇಹವನ್ನುಊರ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ ಎಂದು ಮನೆಯಿಂದ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡುಹೋಗಿ ಮರಣೋತ್ತರ ಪರೀಕ್ಷೆ ನಡೆಸಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಮೂಲಗಳಿಂದ ತಿಳಿದುಬಂದಿದೆ

By dtv

Leave a Reply

Your email address will not be published. Required fields are marked *

error: Content is protected !!