ಪುತ್ತೂರು: ಕರ್ನಾಟಕ ಸರಕಾರದ ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಬೇಟಿ ನೀಡಿದ್ದು ಇವರನ್ನು ಕಾವು ಹೇಮನಾಥ್ ಶೆಟ್ಟಿ ಮತ್ತು ಅನಿತಾ ಹೇಮನಾಥ್ ಶೆಟ್ಟಿ ದಂಪತಿ ಆತ್ಮಿಯವಾಗಿ ಸ್ವಾಗತಿಸಿದರು.
ಸುಳ್ಯದ ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ತೆರಳುವ ಸಂದರ್ಭದಲ್ಲಿ ಕಾವು ಶೆಟ್ಟಿ ನಿಲಯಕ್ಕೆ ಭೇಟಿ ನೀಡಿದ್ದು ಬಳಿಕ ಅನೌಪಚಾರಿಕ ಚರ್ಚೆ ಬಳಿಕ ಫಲಾಹಾರ ಸೇವಿಸಿ ಮಂಗಳೂರಿಗೆ ತೆರಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸೇವಾದಳದ ಮಾಜಿ ಅಧ್ಯಕ್ಷರು ಡಾ ಜಯಂತಿ ಆರ್ ಶೆಟ್ಟಿಯವರು, ಇಂಟಕ್ ನಾಯಕ ಚಿತ್ತರಂಜನ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ದಿವ್ಯನಾಥ್ ಶೆಟ್ಟಿ, ಯುವ ಬರಹಗಾರ ಮಂಜು ಸುವರ್ಣ, ರವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.