dtvkannada

ಬೈಂದೂರು: ಜನರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ ರಕ್ತದಾನದ ಬಗ್ಗೆ ಮಾಹಿತಿ ನೀಡಿ ಜನರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸುವುದು ಸಂಘಟನೆಯ ಆಶಾದಾಯಕ ಬೆಳೆವಣಿಗೆ ಎಂದು ಫಾ/ ವಿನ್ಸೆಂಟ್ ಕುವೆಲ್ಲೊ ಅಭಿಪ್ರಾಯ ಪಟ್ಟರು.
ಅವರು ನಿನ್ನೆ ಬೈಂದೂರು ಹೋಲಿಕ್ರಾಸ್ ಚರ್ಚ್ ಹಾಗೂ ಕೆಥೋಲಿಕ್ ಸಭಾ ಬೈಂದೂರು ಘಟಕ ಮತ್ತು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ( ರಿ) ಇದರ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಹೋಲಿ ಕ್ರಾಸ್ ಚರ್ಚ್ ಬೈಂದೂರು ಇದರ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೆಡ್ ಕ್ರಾಸ್ ಸಂಸ್ಥೆಯ ಸಂಚಾಲಕರಾದ ಜಯಕರ್ ಶೆಟ್ಟಿ, ಸುಖದಲ್ಲಿರುವವರು ಕಷ್ಟ ಪಡುವವರ ಬಗ್ಗೆ ಅರಿತಲ್ಲಿ,ಸಹಾಯ ಸಹಕಾರ ಮಾಡಿದಲ್ಲಿ ನಮಗೆ ಯಾವ ಕಾರಣಕ್ಕೂ ಕಷ್ಟವನ್ನು ಅರಿಯಲು ಸಾದ್ಯವಿಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ, ನಿತಿನ್ ಶೆಟ್ಟಿ, ಶಿವರಾಂ ಶೆಟ್ಟಿ, ಡಾ/ಅಶ್ವಿನಿ, ಆರೋಗ್ಯ ಅಧಿಕಾರಿ ಡಾ/ ರೋಶನ್,ಕಾರ್ಯದರ್ಶಿ ಅನಿತಾ ನಝ್ರತ್,
ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಕಾರ್ಯನಿರ್ವಾಹಕ ರಾದ ಫಯಾಝ್ ಅಲಿ ಉಪಸ್ಥಿತರಿದ್ದರು.

ಕೆಥೋಲಿಕ್ ಸಭಾ ಅದ್ಯಕ್ಷರಾದ ಜೋಸ್ಪಿನ್ ರೊಡ್ರಿಗಸ್ ಸ್ವಾಗತಿಸಿ ವಂದಿಸಿದರು.
ಶಿಬಿರದಲ್ಲಿ ಐವತ್ತ ಮೂರು ಯೂನಿಟ್ ರಕ್ತ ಸಂಗ್ರಹಿಸಲಾಯಿತು.

By dtv

Leave a Reply

Your email address will not be published. Required fields are marked *

error: Content is protected !!