dtvkannada

ಚಾಮರಾಜನಗರ:ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುನ್ನಡೆಸುವ ಭಾರತ್ ಜೋಡೋ ಐಕ್ಯತಾ ಯಾತ್ರೆ ಇಂದು ಕರ್ನಾಟಕವನ್ನು ಪ್ರವೇಶಿಸಲಿದ್ದು ಸಾವಿರಾರು ಮಂದಿ ಕಾರ್ಯಕರ್ತರು ಸಾರ್ವಜನಿಕರು ಐತಿಹಾಸಿಕ ಯಾತ್ರೆಯನ್ನು ಬರಮಾಡಿಕೊಳ್ಳಲಿದ್ದಾರೆ.

20 ದಿನಗಳ ಕಾಲ ಕರ್ನಾಟಕದಲ್ಲಿ ಐತಿಹಾಸಿಕ ಯಾತ್ರೆಯನ್ನು “ರಾಗಾ” ಮುನ್ನಡೆಸಲಿದ್ದು ರಾಜ್ಯ ನಾಯಕರಾದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸಹಿತ ಶಾಸಕರು ಮಾಜಿ ಸಚಿವರು, ಸಂಸದರು ಕಾಂಗ್ರೆಸ್ ಪಕ್ಷದ ನಾಯಕರು ಜನಪ್ರತಿನಿಧಿಗಳು, ಕಾರ್ಯಕರ್ತರು ಜೊತೆಯಾಗಿ ಹೆಜ್ಜೆ ಹಾಕಲಿದ್ದಾರೆ.

ಚಾಮರಾಜನಗರದಲ್ಲಿ ಇಂದು ರಾಹುಲ್ ಗಾಂಧಿ ರವರಿಗೆ ಕರ್ನಾಟಕ ರಾಜ್ಯ ನಾಯಕರಿಂದ ಅದ್ದೂರಿಯ ಸ್ವಾಗತ ಸಿಗಲಿದೆ.

ಇತ್ತ ಪುತ್ತೂರಿನಿಂದಲೂ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಗುಂಡ್ಲುಪೇಟೆಗೆ ತಲುಪಿದ್ದು ತನ್ನ ನಾಯಕನ ಐಕ್ಯ ಯಾತ್ರೆಗೆ ಸಾಕ್ಷಿಯಾಗಲಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!