dtvkannada

'; } else { echo "Sorry! You are Blocked from seeing the Ads"; } ?>

ಕೋಲಾರ: ಗಂಡ- ಹೆಂಡತಿ ನಡುವಿನ ಜಗಳವನ್ನು ಪ್ರಶ್ನಿಸಿದ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ನಗರದ ಬಂಬುಬಜಾರ್​ನಲ್ಲಿ ನಡೆದಿದೆ.
ಫಯಾಜ್​ ಎಂಬುವನು ತನ್ನ ಮೈದುನನನ್ನು (ಹೆಂಡತಿಯ ತಂಗಿ ಗಂಡ) ಕೊಲೆ ಮಾಡಿದ್ದಾನೆ. ಜೊತೆಗೆ ಆತನ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಗಾಯಗೊಳಿಸಿರುವ‌ ಘಟನೆ ಜರುಗಿದೆ.

ಹೌದು ಗಂಡ ಹೆಂಡತಿ ನಡುವಿನ ಗಲಾಟೆಯಲ್ಲಿ ಪ್ರಶ್ನೆ ಮಾಡಿದ ಹೆಂಡತಿಯ ತಂಗಿಯ ಗಂಡನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಮತ್ತೋರ್ವ ಸಂಬಂಧಿಯ ಮೇಲೂ ಕೊಲೆ ಯತ್ನ ನಡೆಸಿದ್ದಾನೆ‌. ಇದೀಗ ಆರೋಪಿ ಫಯಾಸ್​ ಎಂಬಾತನನ್ನು ಗಲ್​ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಫಯಾಜ್ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರಿಂದ ಮೂರು ತಿಂಗಳ ಹಿಂದೆಯೇ ಪತ್ನಿ ತಾಜುನ್ನೀಸಾ ತವರು ಮನೆ ಸೇರಿಕೊಂಡಿದ್ದಳು. ಮೂರು ತಿಂಗಳ ನಂತರ ಫಯಾಜ್ ತನ್ನ​ ಪತ್ನಿ ತಾಜುನ್ನೀಸಾಳೊಂದಿಗೆ ಮಾತನಾಡಲು ಇಂದು(ಮಾ.19) ಮಧ್ಯಾಹ್ನ ತೆರಳಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಆಗ ಅಲ್ಲೇ ಇದ್ದ ತಾಜ್​ ಹಾಗೂ ಜಪ್ರುಲ್ಲಾ ಎಂಬವರು ಗಲಾಟೆ ಬಿಡಿಸಲು ಹೋಗಿದ್ದಾರೆ. ಈ ವೇಳೆ ಫಯಾಜ್​ ಏಕಾಏಕಿ ತಾಜ್​ಗೆ ಚಾಕುವಿನಿಂದ ಇರಿದಿದ್ದಾನೆ. ತಾಜ್​ ಸ್ಥಳದಲ್ಲೇ ಮೃತಪಟ್ಟರೆ, ಜೊತೆಗಿದ್ದ ಜಪ್ರುಲ್ಲ ಚಾಕು ಇರಿತಕ್ಕೆ ಒಳಗಾಗಿದ್ದು, ಗಾಯಾಳುವನ್ನು ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳೆದ ಹತ್ತು ವರ್ಷಗಳ ಹಿಂದೆ ಮೃತ ತಾಜ್, ಫಯಾಜ್​ನ ನಾದನಿಯನ್ನ (ಹೆಂಡತಿಯ ತಂಗಿಯನ್ನು) ಮದುವೆಯಾಗಿದ್ದ.
ಇನ್ನು ಫಯಾಜ್ ಮೊದಲಿನಿಂದಲೂ ಕುಡುಕನಾಗಿದ್ದು ಆಗಾಗ ‌ಒಂದಲ್ಲೊಂದು ಕಿರಿಕ್ ಮಾಡುತ್ತಲೇ ಬರುತ್ತಿದ್ದ. ‌ಇದರ ಬಗ್ಗೆ ‌ಹತ್ತು ಹಲವಾರು ರಾಜಿ ಪಂಚಾಯತಿಗಳು ನಡೆದರೂ ನಾಯಿ‌ ಬಾಲ ಡೊಂಕು‌ ಎಂಬಂತೆ ಒಂದೆರೆಡು ದಿನ ಸುಮ್ಮನೆ‌ ಇದ್ದು ಮತ್ತೆ ತನ್ನ ಚಾಳಿಯನ್ನು ಮುಂದುವರೆಸುತ್ತಿದ್ದ.

'; } else { echo "Sorry! You are Blocked from seeing the Ads"; } ?>

ಇತ್ತೀಚಿಗೆ ಸಂಪೂರ್ಣವಾಗಿ ಕುಡಿತದ ದಾಸನಾಗಿದ್ದ ಫಯಾಜ್ ಪ್ರತಿದಿನ ಕುಡಿದು ಬಂದು ಹೆಂಡತಿಯನ್ನು ತಾಜುನ್ನೀಸಾಳನ್ನು ಹೊಡೆದು ಗಲಾಟೆ ಮಾಡುತ್ತಿದ್ದ. ಇದರಿಂದ‌ ಬೇಸತ್ತ ತಾಜುನ್ನೀಸಾ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಳು. ಸುಮಾರು ಮೂರು ತಿಂಗಳಾದರೂ ಇತ್ತ ಸುಳಿಯದ ಫಯಾಜ್ ಇಂದು ದಿಢೀರನೇ ಹೆಂಡತಿಯ ನೆನಪು ಬಂದು ಪೋನ್ ಮಾಡಿ ಮಾತನಾಡಬೇಕು ಎಂದು ಕರೆದಿದ್ದಾನೆ.

ಪತ್ನಿ ತಾಜುನ್ನೀಸಾ ಮನೆಯವರಿಗೆ ವಿಷಯ ತಿಳಿಸಿದಾಗ ತಾಜ್ ಮತ್ತು ತಮ್ಮ ಜಪ್ರುಲ್ಲಾ ಜತೆಗೆ ಹೋಗಿದ್ದಾರೆ. ಮಾತನಾಡುವಂತಹ‌ ಸಂದರ್ಭದಲ್ಲಿ ಮೊದಲೇ ಚಾಕು ತೆಗೆದುಕೊಂಡು ಹೋಗಿದ ಪಯಾಜ್ ಅಲ್ಲಿಗೆ ಬಂದ ತಾಜ್ ಗೆ ಚಾಕುವಿನಿಂದ ಇರಿದ್ದಾನೆ. ‌ಇನ್ನು ಗಲ್​ಪೇಟೆ ಪೊಲೀಸರು ಆರೋಪಿ ಪಯಾಜ್​ನನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದು ಕೋಲಾರ ಎಸ್ಪಿ ನಾರಾಯಣ್​ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಒಟ್ಟಾರೆ ಸಂತೋಷದಿಂದ ಸಂಸಾರ ನಡೆಸಬೇಕಾಗಿದ್ದ ವ್ಯಕ್ತಿ ಕುಡಿತದ ಚಟಕ್ಕೆ ದಾಸನಾಗಿ ತನ್ನ ಕೈಯಾರೆ ತನ್ನ ಸಂಸಾರವನ್ನು ಹಾಳುಮಾಡಿಕೊಂಡಿದ್ದಲ್ಲದೆ, ತಾನು ಜೈಲುಪಾಲಾಗಿದ್ದು ಇಂದು ಇಡೀ ಕುಟುಂಬ ಬಿದ್ದು ತನ್ನ ಕೈಯಾರೆ‌ ಜೀವನ ಹಾಳು ಮಾಡಿಕೊಂಡಿದಲ್ಲದೆ, ತನ್ನ ಸ್ವತ ಮೈದುನನ್ನು ಕೊಲೆ ಮಾಡಿ ಜೈಲಿಗೆ ಸೇರಿದರೆ ಇತ್ತ ಹೆಂಡತಿ ಮತ್ತು ಮೈದುನನ ಕುಟುಂಬ ಬೀದಿಗೆ ಬಿದ್ದಿವೆ.

ವರದಿ: ರಾಜೇಂದ್ರಸಿಂಹ ಕೋಲಾರ

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!