dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಪುತ್ತೂರು ಶಾಸಕರಾದ ಸಂಜೀವ ಮಠಂದೂರುವರರ ರಾಸಲೀಲೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು ನೆಟ್ಟಿಗರು ಬಿಜೆಪಿಯ ಕಾಲೆಳೆದಿದ್ದಾರೆ.

ಇನ್ನು ವಿಧಾನ ಸಭಾ ಚುಣಾವಣೆ ಹತ್ತಿರ ಬರುತ್ತಿದ್ದಂತೆ ಒಬ್ಬೊಬ್ಬರ ಒಂದೊಂದು ಮುಖವಾಡಗಳು ಹೊರಬೀಳುತ್ತಿದ್ದು ಇದೀಗ ಪುತ್ತೂರು ಶಾಸಕರ ರಾಸಲೀಲೆಯಲ್ಲಿ ತೊಡಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಹರಿದಾಡುತ್ತಿವೆ.
ಇದೀಗ ಹೊರಬಿದ್ದಿದ್ದು ಟ್ರೈಲರ್ ಇನ್ನು ಪಿಚ್ಚರ್ ಬಾಕಿ ಇದ್ದು ಅದರ ವೀಡಿಯೋ ಕೂಡ ಇಂದು ನಾಳೆಯಲ್ಲಿ ಹೊರಬೀಳಲಿದೆಯೆಂದು ಸಾಮಾಜಿಕ ಜಾಲ ತಾಣಗಳಲ್ಲಿ ನೆಟ್ಟಿಗರು ಬರೆದುಕೊಂಡಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕರು, ಜೆಡಿಎಸ್ ನಾಯಕರುಗಳು ಬಿಜೆಪಿ ಶಾಸಕನ ಸಾಧನೆ ನೋಡಿ ಎಂದು ತಮ್ಮ ಪೇಜುಗಳಲ್ಲಿ ಹರಿಯಬಿಟ್ಟಿದ್ದು ಶಾಸಕ ಸಂಜೀವ ಮಠಂದೂರು ವಿರುದ್ಧ ಬಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಇದುವೆನಾ ಬಿ,ಜೆ,ಪಿ ಮಹಿಳೆಯರಿಗೆ ನೀಡುವ ಸ್ಥಾನ ಮಾನ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಇದೆಲ್ಲದರ ನಡುವೆ ಪುತ್ತೂರಿಗೆ‌ ಮತ್ತೊಮ್ಮೆ ಸಂಜೀವಣ್ಣ ಎನ್ನುತ್ತಿದ್ದವರೀಗ ತಲೆ ತಗ್ಗಿಸುವಂತಾಗಿದೆ.
ಶಾಸಕರ ಈ ಒಂದು ನಡೆಯಿಂದ ಅವರ ಜೊತೆಗಿರುವ ಅಭಿಮಾನಿಗಳಂತು ಮುಖಭಂಗ ಅನುಭವಿಸಿದ್ದಾರೆ.

ಈ ಬಾರಿ ಮತ್ತೊಮ್ಮೆ ಶಾಸಕರಾಗುವ ಕನಸು ಕಾಣುತ್ತಿದ್ದ ಸಂಜೀವ ಮಠಂದೂರವರಿಗೆ ಈ ಬಾರಿ ಟಿಕೆಟ್ ನೀಡುವುದು ಸಂಶಯವಾಗಿದ್ದು ಈಗಾಗಲೇ ಟಿಕೆಟ್ ಕೈ ತಪ್ಪಿದೆ ಎನ್ನುವ ಮಾತುಗಳು ಕೂಡ ಕೇಳಿ‌ಬರುತ್ತಿವೆ.

ಅದೇ ರೀತಿ ರೋಮ್ಯಾಂಟಿಕ್ ಶಾಸಕರ ಸಾಧನೆ ಮಾಡಿದ ಚಿತ್ರಗಳು ಈಗಾಗಲೇ ಅಮಿತ್ ಷಾ ಅವರ ಬಳಿ ತಲುಪಿದ ಬಗ್ಗೆ ಮಾಹಿತು ಕೇಳಿ‌ ಬರುತ್ತಿದ್ದು ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆಂಬುವುದನ್ನು ಕಾದು ನೋಡಬೇಕಾಗಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!