dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ವಿಶ್ವಹಿಂದೂ ಪರಿಷತ್, ಭಜರಂಗದಳದಿಂದ ಸೌಜನ್ಯಳ ನೈಜ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲು ಸಾಮೂಹಿಕ ಪ್ರಾರ್ಥನೆಯು ಇಂದು ಪುತ್ತೂರಿನ ಲಕ್ಷೀ ವೆಂಕಟರಮಣ, ಮತ್ತು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಕಂಡು ಹಿಡಿಯುವಂತೆ ಹಾಗೂ ಅಪರಾಧಿಗಳಿಗೆ ಶಿಕ್ಷೆ ವಿಧಿಸುವಂತೆ ಇದೀಗ ದೇವರ ಮೊರೆ ಹೋಗಿದ್ದಾರೆ.

ಸೌಜನ್ಯ ಪ್ರಕರಣದಲ್ಲಿ ಯಾರಿದ್ದಾರೆ,ಯಾರೆಲ್ಲಾ ಆರೋಪಿಗಳಿಗೆ ಸಹಕರಿಸಿದ್ದಾರೆ ಅನ್ನುವ ಸತ್ಯ ಮಾಜಿ ಶಾಸಕ ವಸಂತ ಬಂಗೇರರಿಗೆ ತಿಳಿದಿದೆ. ಸತ್ಯ ಹೇಳಿದರೆ ಅವರನ್ನು ಸಾಯಿಸುತ್ತಾರೆ ಎಂದು ಸೌಜನ್ಯಳ ತಾಯಿ ಕುಸುಮವತಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.

'; } else { echo "Sorry! You are Blocked from seeing the Ads"; } ?>

ಪ್ರಾರ್ಥನೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸೌಜನ್ಯ ತಾಯಿ ಅವರು ಮಾಜಿ ಶಾಸಕ ವಸಂತ ಬಂಗೇರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸುತ್ತಾ ಬೆಳ್ತಂಗಡಿಯಲ್ಲಿ ನಡೆಯುವ ಪ್ರಕರಣಗಳ ಹಿಂದೆ ಷಡ್ಯಂತ್ರ ಇದೆ.ಸಿಬಿಐ ಗೆ ಪ್ರಕರಣ ಕೊಡಬೇಕೆಂದು ನಮ್ಮನ್ನು ಮುಖ್ಯಮಂತ್ರಿಗಳ ಬಳಿ ವಸಂತ ಬಂಗೇರ ಕರೆದೊಯ್ದಿದ್ದರು.

ಇದೀಗ ಸೌಜನ್ಯ ಪ್ರಕರಣದಲ್ಲಿ ಯಾರಿದ್ದಾರೆ,ಯಾರೆಲ್ಲಾ ಆರೋಪಿಗಳಿಗೆ ಸಹಕರಿಸಿದ್ದಾರೆ ಅನ್ನುವ ಕಟು ಸತ್ಯ ವಸಂತ ಬಂಗೇರರಿಗೆ ತಿಳಿದಿದೆ.ಸತ್ಯ ಹೇಳಿದರೆ ಅವರನ್ನು ಸಾಯಿಸುತ್ತಾರೆ ಎನ್ನುವ ವಿಚಾರವನ್ನು ಅವರು ಹೇಳಿದ್ದುಈ ಎಲ್ಲಾ ಮಾಹಿತಿಯನ್ನು ಸದ್ಯದಲ್ಲೇ ಸಮಾಜದ ಮುಂದೆ ಇಡುತ್ತಾರೆ ಅಂದಿದ್ದಾರೆ.

ಸಮಯ ಬಂದಾಗ ಆ ಮಾಹಿತಿಯನ್ನು ಬಂಗೇರರು ನೀಡಲಿದ್ದು ಮಾಹಿತಿಯನ್ನು ಈಗಲೇ ಬಿಡುಗಡೆ ಮಾಡಬೇಕೆಂದು ನಾನು ಒತ್ತಾಯಿಸುತ್ತಿಲ್ಲ. ಕಾನೂನು ಪ್ರಕಾರ ಎಲ್ಲಿ ಹೇಳಬೇಕು ಅಲ್ಲಿ ಅವರು ಹೇಳುತ್ತಾರೆ ಎಂದು ಹೇಳಿದ್ದಾರೆ ಅದರ ಮೇಲೆ ನಂಬಿಕೆ ಇದೆ ಅನ್ನುವಂತೆ ಮಾತು ನಿಲ್ಲಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!