ಮಂಗಳೂರು: ಪ್ರತ್ಯೇಕ ಅಪಘಾತ ಪ್ರಕರಣ 6 ಮಂದಿ ಮೃತ್ಯು
ಬೆಳ್ಳಂಬೆಳಗ್ಗೆ ಇಂದು ಮಂಗಳೂರನ್ನು ಬೆಚ್ಚಿಬೀಳಿಸಿದ ಅಪಘಾತ ಪ್ರಕರಣ
ಮಂಗಳೂರು: ಬಿಸಿರೋಡ್ ಮತ್ತು ಪಣಂಬೂರುನಲ್ಲಿ ನಡೆದ ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಸುಮಾರು ಆರು ಮಂದಿ ಮೃತಪಟ್ಟ ಘಟನೆ ಮಂಗಳೂರುನಲ್ಲಿ ಇಂದು ಸಂಭವಿಸಿದೆ.

ಬೆಂಗಳೂರುನಿಂದ ಉಡುಪಿ ಕಡೆ ಪ್ರಯಾಣ ಬೆಳಸುತ್ತಿದ್ದ ಇನೋವಾ ಕಾರೊಂದು ಬೆಳಗ್ಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಬಿಸಿರೋಡ್ ನ ನಾರಾಯಣ ಗುರು ವೃತ್ತಕ್ಕೆ ಡಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು ಒಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಘಟನೆಯಲ್ಲಿ ಐವರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.


ಇಂದು ಮದ್ಯಾಹ್ನ ವೇಳೆ ಸುರತ್ಕಲ್ ಸಮೀಪದ ಪಣಂಬೂರು ಬಳಿ ಟ್ಯಾಂಕರ್ ಲಾರಿಯೊಂದು ನಿಲ್ಲಿಸಿದ್ದ ರಿಕ್ಷಾವೊಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು ಅಪಘಾತದ ತೀವ್ರತೆಗೆ ಮೂರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಗಳೂರುನಲ್ಲಿ ಇಂದು ಮುಂಜಾನೆಯಿಂದ ನಡೆದ ಪ್ರತ್ಯೇಕ ಎರಡು ಅಪಘಾತ ಪ್ರಕರಣದಲ್ಲಿ ಆರು ಮಂದಿಗಳು ಮೃತಪಟ್ಟಿದ್ದಾರೆ.ಬೆಳ್ಳಂಬೆಳಗ್ಗೆ ಕೇಳಿ ಬಂದ ಅಪಘಾತದ ಸುದ್ದಿಯಿಂದ ಮಂಗಳೂರು ಬೆಚ್ಚಿಬಿದ್ದಿದೆ.


