ಮಂಗಳೂರು: ಯಂಗ್ ಮೆನ್ಸ್ ಕುದ್ರೋಳಿ ವತಿಯಿಂದ ಕುದ್ರೋಳಿಯ ಮುಹ್ಯುದ್ದೀನ್ ನಗರ ಮೈದಾನದಲ್ಲಿ ಬೇರೆ ಬೇರೆ ಪ್ರದೇಶದ ಸುಮಾರು ನೂರಾರು ಮಕ್ಕಳಿಗೆ ಸಾಮೂಹಿಕ ಸುನ್ನತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಹ್ಯುದ್ದೀನ್ ಜುಮಾ ಮಸೀದಿ ಖತೀಬರಾದ ಮುಹಮ್ಮದ್ ಬಾಖವಿ ಉಸ್ತಾದರು ದುಆದ ಮೂಲಕ ಚಾಲನೆ ನೀಡಿದರು. ಡಾ ಝಾಹಿದ್ ಹುಸೈನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಅಝೀಝ್ ಎ.ಎ.ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕುದ್ರೋಳಿ ಕಾರ್ಪೊರೇಟರ್ ಶಂಸುದ್ದೀನ್ ಎಚ್.ಬಿ.ಟಿ, ಮಾಜಿ ಕಾರ್ಪೊರೇಟರ್ ಬಿ ಅಬುಬಕ್ಕರ್ ಯಂಗ್ ಮೆನ್ಸ್ ಕುದ್ರೋಳಿ ಇದರ ಉಪಾಧ್ಯಕ್ಷ ರಾದ ಇಮ್ತಿಯಾಝ್ ಕುದ್ರೋಳಿ, ಕುದ್ರೋಳಿ ಯಂಗ್ ಬಾಯ್ಸ್ ಇದರ ಅಧ್ಯಕ್ಷ ರಾದ ಇಖ್ವಾನ್ ಕುದ್ರೋಳಿ, ಕೇರ್ ದಿ ಹೆಲ್ಪಿಂಗ್ ಹ್ಯಾಂಡ್ಸ್ ಇದರ ಅಧ್ಯಕ್ಷ ರಾದ ಮುಝೈರ್ ಕುದ್ರೋಳಿ ,ಹಮ್ಮಬ್ಬ ಮೋನು ಇನ್ನಿತರರು ಉಪಸ್ಥಿತರಿದ್ದರು.
ದ್ವಿತೀಯ ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗೆ ಮದ್ದುಗಳ ಕಿಟ್, ಹಣ್ಣು ಹಂಪಲು ,ವಸ್ತ್ರಗಳನ್ನು ಹಾಗೂ ಪೋಷಕರಿಗೆ ಸಾರಿಗೆ ಶುಲ್ಕವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಅಧ್ಯಕ್ಷರಾದ ಯಾಸೀನ್ ಕುದ್ರೋಳಿ, ಜಾಮೀಅ ಮಸೀದಿ ಕುದ್ರೋಳಿ ಕೋಶಾಧಿಕಾರಿ ಮಕ್ಬೂಲ್ ಅಹ್ ಮದ್,ಮಾಜಿ ಕಾರ್ಪೋಟರ್ ಅಬ್ದುಲ್ ಅಝೀಝ್,ಮುಹ್ ಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಪಿ .ಪಿ.ಎ ಅಬ್ದುಲ್ ಅಝೀಝ್, ಕಾರ್ಪೋರೆಟರ್ ಝೀನತ್ ಶಂಸುದ್ದೀನ್ ಸಮೇತ ಹಲವಾರು ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಬಾಗವಹಿಸಿದರು.
ಯಂಗ್ ಮೆನ್ಸ್ ಇದರ ಸಲಹಾ ಸಮಿತಿಯ ಸದಸ್ಯರಾದ ಹಫೀಝ್ ಅರೇಬಿಯನ್,ಹನೀಫ್ ಕುದ್ರೋಳಿ, ಇಮ್ರಾನ್ ಕುದ್ರೋಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಶಾನ್ ಕಿರಾಅತ್ ಪಠಿಸಿದರು,ವಸೀಮ್ ಅಕ್ರಮ್ ಪ್ರಾಸ್ತಾವಿಕ ಭಾಷಣ ಮಾಡಿದರು,ಹಾಗೂ ಕಬೀರ್ ಕುದ್ರೋಳಿ ಕಾರ್ಯಕ್ರಮ ವನ್ನು ನಿರೂಪಿಸಿದರು.