dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ವಿಧಾನಸಭಾ ಚುನಾವಣೆ ಟಿಕೇಟ್ ಘೋಷಣೆಯ ಬಗ್ಗೆ‌ ಹಲವು ಚರ್ಚೆಗಳು ಬರುತ್ತಿದ್ದು ಇದೀಗ ಅದೆಲ್ಲದಕ್ಕೂ ಅಶೋಕ್ ರೈ ಯವರು ತೆರೆ‌ಎಳೆದಿದ್ದಾರೆ.

ಹೌದು ಮಹೋತಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ರೈಯವರು ನನ್ನ ಹೆಸರು ಅಂತಿಮವಾಗಿ ಘೋಷಣೆಯಾಗಿಲ್ಲ ನನ್ನಲ್ಲಿ ಪಕ್ಷಕ್ಕಾಗಿ ತಮ್ಮ ಕ್ಷೇತ್ರದಲ್ಲಿ ಕೆಲಸ ಕಾರ್ಯಗಳನ್ನು ಮಾಡಲು ಸೂಚನೆ ನೀಡಿದ್ದಾರೆ ಎಂದು ಪತ್ರಿಕೆಯವರಿಗೆ ತಿಳಿಸಿದ್ದಾರೆ.

ಜೊತೆಗೆ ಪುತ್ತೂರಿಗೆ ಕಾಂಗ್ರೆಸ್ ಪಕ್ಷದಿಂದ ಅಶೋಕ್ ರೈಯವರ ಹೆಸರು ಫೈನಲ್ ಆಗಿದೆ ಎನ್ನುವ ಮಾಹಿತಿ ಕೇಳಿಬರುತ್ತಿದೆ ಇದರ ಬಗ್ಗೆ‌ ಏನಂತಿರಾ ಎಂದು ಕೇಳಿದಾಗ ಮಾಹಿತಿ‌ಯಿದೆ‌ ಯಾವುದಕ್ಕೂ ಪಕ್ಷದ ಹೈಕಮಾಂಡ್ ಫೈನಲ್ ಮಾಡಿ ಘೋಷಣೆ‌ ಮಾಡಿದ ನಂತರವೇ ನಾನದನ್ನು ತಿಳಿಸಬಲ್ಲೇ ಎನ್ನುವ ಮಾತನ್ನು ಆಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!