ಉಪ್ಪಿನಂಗಡಿ: ವಿದ್ವಾಂಸರು ಸುನ್ನೀ ಸಮುದಾಯದ ನೇತಾರರು ಆದ ಸೆಯ್ಯದ್ ಕರ್ವೆಲ್ ತಂಙಳರು ಅಲ್ಪ ದಿನದ ಅನಾರೋಗ್ಯ ಹಿನ್ನಲೆ ಇದೀಗ ಆಸ್ಪತ್ರೆಯಲ್ಲಿ ಮರಣ ಹೊಂದಿದರು.
ಕಳೆದ ಒಂದು ವಾರದ ಹಿಂದೆ ರಿಕ್ಷಾ ಅಪಘಾತಕ್ಕೆ ಒಳಗಾಗಿದ್ದ ತಂಙಳರು ತೀವ್ರವಾದ ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಇಂದು ಮುಂಜಾನೆ ಹೊತ್ತು ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾಗಿ ಅವರ ಆಪ್ತ ಮೂಲಗಳು ಹೇಳಿವೆ.
ನಿನ್ನೆ ತಾನೇ ತಂಙಳರ ಸಹೋದರಿಯ ಮಗಳು ಹೃದಯಾಘಾತದಿಂದ ನಿಧನ ಹೊಂದಿದ್ದು ಇದರ ಬೆನ್ನಲ್ಲೇ ತಂಙಳರ ಮರಣ ಕುಟುಂಬಸ್ಥರು ಮತ್ತು ತಂಙಳರ ಅಭಿಮಾನಿ ಜನತೆ ಕಣ್ಣೀರಿನಲ್ಲಿ ಮುಳುಗಿದ್ದಾರೆ.