ಉಪ್ಪಿನಂಗಡಿ: ಸರಳಿಕಟ್ಟೆ ಕಾನ ಪರಿಸರದ ನೆರೆ ಹೊರೆಯ ಅಸ್ಮಾವುಲ್ ಹುಸ್ನಾ ಮಜ್ಲಿಸ್ ವತಿಯಿಂದ ಇಲಲ್-ಹಬೀಬ್ ಮೌಲಿದ್ ಮಜ್ಲಿಸ್ ಹಾಗೂ ಮಕ್ಕಳ ಮೀಲಾದ್ ಸಾಂಸ್ಕೃತಿಕ ಕಾರ್ಯಕ್ರಮವು ಝಕರಿಯ್ಯ ಪಿ.ಎಸ್ ರವರ ಮನೆಯಲ್ಲಿ ಮುಹಮ್ಮದ್ ಸಖಾಫಿ ಕನ್ಯಾಡಿ ಇವರ ನೇತೃತ್ವ ದಲ್ಲಿ ನಡೆಯಿತು.
ಮೌಲಿದ್ ಬುರ್ಧಾ ಕಾರ್ಯಕ್ರಮವು ಪ್ರೇಕ್ಷಕರನ್ನು ಆಧ್ಯಾತ್ಮಿಕತೆಗೆ ಕೊಂಡುಯ್ಯಿತು.
ಪ್ರಸ್ತುತ ಕಾರ್ಯಕ್ರಮ ದಲ್ಲಿ ಬನಾರಿ ಯೂಸುಫ್ ಸಖಾಫಿ ಮದ್ಹರ್ರಸೂಲ್ ಪ್ರಬಾಷನ ನಡೆಸಿದರು.
ನೆರೆಹೊರೆಯ ಮಕ್ಕಳಿಂದ ಮೀಲಾದ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸುತ್ತ ಮುತ್ತಲಿನ ಹಲವಾರು ಮಂದಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಿದರು.