ಬೆಂಗಳೂರು: ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ಇವರ ಮೊಮ್ಮಗಳು ಖ್ಯಾತ ವೈದ್ಯೆ ಸೌಂದರ್ಯ(30) ಎಂಬವರು ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ವಸಂತ ನಗರದಲ್ಲಿ ಇಂದು ನಡೆದಿದೆ.
ಆತ್ಮ ಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಬಿ.ಎಸ್ ಯಡಿಯೂರಪ್ಪರವರ ಎರಡನೇ ಪುತ್ರಿ ಪದ್ಮಾವತಿಯವರ ಮಗಳಾಗಿದ್ದಾರೆ ಸೌಂದರ್ಯ.
ಇವರಿಗೆ ಒಂದು ಮಗುವಿದ್ದು
ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದರು ಎನ್ನಲಾಗಿದೆ.
2018 ರಲ್ಲಿ ಡಾ.ನೀರಜ್ ಎಂಬವರ ಜೊತೆ ಇವರ ವಿವಾಹವಾಗಿತ್ತು.
ಘಟನೆ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಯಡಿಯೂರಪ್ಪರವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ.