ಮಂಗಳೂರು: ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡ ಫ್ರೆಂಡ್ಸ್ ಮದನಿ ನಗರ ಅಸೋಯಿಸೇಶನ್ ಸಾಮಾಜದ ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಾಧಕರನ್ನು ಗುರುತಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕಾಯರ್ಯಕ್ರಮದಲ್ಲಿ ಸಮಾಜ ಸೇವೆಗಾಗಿ ಝಮೀರ್, ನೌಶೀರ್ ಮತ್ತು ಶಿಹಾಬ್ ತಂಙಳ್ ಸನ್ಮಾನಿತರಾದರೆ ಮುನವ್ವರ್ ಜೋಗಿಬೆಟ್ಟು ಅವರನ್ನು ಸಾಹಿತ್ಯ ಕ್ಷೇತ್ರರದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಲ್ಪ್ರಡ್ ಡಿಸೋಜ ವಹಿಸಿಕೊಂಡಿದ್ದರು. ಮಹೇಶ್ ಕಾರ್ಯಾ ಧ್ಯಕ್ಷರು ಯುಸಿಎ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯುಸಿಎ ಅಧ್ಯಕ್ಷರಾದ ಸಂತೋಷ್ ರವರು ಕಾರ್ಯಕ್ರಮದ ಕುರಿತು ಸವಿವರವಾಗಿ ಮಾತನಾಡಿದರು.
ಅಧ್ಯಕ್ಷರು ತಮ್ಮ ಭಾಷಣದಲ್ಲಿ ಸಮಾಜದ ಯಶೋಭಿವೃದ್ಧಿಗಾಗಿ ದುಡಿಯಲು ಮನವಿ ಮಾಡಿದರು. ಸೋಲಿನಲ್ಲಿ ನಮ್ಮತಪ್ಪುಗಳನ್ನು ತಿದ್ದಿಕೊಂಡು, ಒಂದು ಬಲಿಷ್ಟ ತಂಡವಾಗಿ ಹೊರಹೊಮ್ಮಲು ಶ್ರಮಿಸಬೇಕು. ಕಾರ್ಯಚರಣೆಗೆ ಎಲ್ಲಾ ಸಹಕಾರಗಳನ್ನು ನೀಡಲು ಸಿದ್ಧ ಅನ್ನುವ ಭರವಸೆಯನ್ನೂ ಅಧ್ಯಕ್ಷರು ನೀಡಿದರು. ಗಣ್ಯರ ಉಪಸ್ಥಿತಿಯಲ್ಲಿ ಹೊಸ ತಂಡದ ಜೆರ್ಸಿ ಅನಾವರಣ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ರೆಹ್ ನಾ ಬಾನು,ಸಿರಾಜ್,ಸಾದಿಕ್ ಉಪಸ್ಥಿತರಿದ್ದರು.