ತಮಿಳುನಾಡು: ಮಹಿಳೆಯೊರ್ವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಲೈಂಗಿಕ ಕಿರುಕುಳ ನೀಡುವುದಷ್ಟೇ ಅಲ್ಲದೇ ವಿದ್ಯುತ್ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ಮಾಡಿರುವಂತಹ ದಾರುಣ ಘಟನೆ ತಮಿಳುನಾಡು ಜಿಲ್ಲೆಯ ಕನ್ಯಾಕುಮಾರಿಯ ಮೇಳ ಪಾಳಯಂ ಜಂಕ್ಷನ್ನಲ್ಲಿ ನಡೆದಿದೆ.
ಮಹಿಳೆ ದೂರಿನನ್ವಯ ಪೊಲೀಸರು ಮೂವರು ಆಟೋಚಾಲಕರಾದ ಶಶಿ, ವಿನೋದ್, ವಿಜಯಕಾಂತ್ರನ್ನು ಬಂಧಿಸಿದ್ದು, ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತ ಮಹಿಳೆ ವಿಧವೆಯಾಗಿದ್ದು, 9 ವರ್ಷದ ಮಗುವನ್ನು ಸಹ ಹೊಂದಿದ್ದಾರೆ. ಪ್ರತಿನಿತ್ಯ ಮಹಿಳೆ ಕೆಲಸಕ್ಕೆಂದು ಮಸಾಜ್ ಸೆಂಟರ್ಗೆ ಹೋಗುವ ಮಾರ್ಗ ಮಧ್ಯೆ ಮೇಲಪಾಲಯಂ ಜಂಕ್ಷನ್ನಲ್ಲಿ ಆಟೋರಿಕ್ಷಾ ಚಾಲಕರಿಂದ ಪ್ರತಿದಿನ ಕಿರುಕುಳ ಎದುರಿಸುತ್ತಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಿತ್ಯ ಕಿರುಕುಳ ಅನುಭವಿಸಿದ ಮಹಿಳೆ:
ಪ್ರತಿನಿತ್ಯ ಕಿರುಕುಳ ಮುಂದುವರೆಯುತ್ತಿದ್ದಂತೆ ಮಹಿಳೆ ತನ್ನ ಸುರಕ್ಷತೆಗಾಗಿ ಬ್ಯಾಗ್ನಲ್ಲಿ ಚಿಲ್ಲಿ ಪೌಡರ್ ಮತ್ತು ಪೇಪರ್ ಪೌಡರ್ ಇಟ್ಟಿಕೊಂಡಿದ್ದಾರೆ. ಎಂದಿನಂತೆ ಕೂಡ ನಿನ್ನೆ ಶುಕ್ರವಾರ(ಮಾ. 10) ಮಹಿಳೆ ಕೆಲಸಕ್ಕೆಂದು ಮೇಳಪಾಲಯಂ ಜಂಕ್ಷನ್ನಲ್ಲಿ ನಡೆದುಕೊಂಡು ಹೋಗುವಾಗ ಅದೇ ಆಟೋಚಾಲಕರು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ.
ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ:
ಮಹಿಳೆ ಅವರನ್ನು ಪ್ರಶ್ನಿಸಿದ್ದು, ಆಟೋಚಾಲಕರು ಸಡನ್ ಆಗಿ ಮಹಿಳೆ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇದರಿಂದ ಗಾಬರಿಗೊಂಡ ಮಹಿಳೆ ಬ್ಯಾಗ್ನಲ್ಲಿದ್ದ ಚಿಲ್ಲಿ ಪೌಡರ್ ಮತ್ತು ಪೇಪರ್ ಪೌಡರ್ನ್ನು ಅವರ ಮೇಲೆ ಎರಚಿದ್ದಾಳೆ. ಮತ್ತಷ್ಟು ಕೋಪಗೊಂಡ ಚಾಲಕರು ಅವಳನ್ನು ಬಲವಂತವಾಗಿ ಹಿಡಿದು, ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ.
ಸುಮಾರು ಒಂದುವರೆ ಗಂಟೆಗಳ ಕಾಲ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಲಾಗಿದ್ದು, ಸಾರ್ವಜನಿಕರು ಯಾರೂ ಕೂಡ ನನ್ನ ರಕ್ಷಣೆಗೆ ಬರಲಿಲ್ಲ. ಆದರೆ ಕೃತ್ಯವನ್ನು ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ ಎಂದು ಸಂತ್ರಸ್ತ ಮಹಿಳೆ ತನ್ನ ದೂರಿನಲ್ಲಿ ದಾಖಲಿಸಿದ್ದಾರೆ