';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಸುಳ್ಯ: ನಾಡಿಗೆ ಬಂದ ಕಾಡುಕೋಣವೊಂದು ತೋಟಕ್ಕೆ ಬಂದು ಮರಳಿ ಹೋಗುತ್ತಿದ್ದ ವೇಳೆ ತೋಟದಿಂದ ಹಾರುವ ಸಂದರ್ಭದಲ್ಲಿ ಆನೆಕಂದಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡೆಕೋಲು ಗ್ರಾಮದ ಕೇನಾಜೆಯಲ್ಲಿ ನಡೆದಿದೆ.
ಕೇನಾಜೆ ಕುಸುಮಾಧರ ಮಾವಜಿಯವರ ತೋಟದಲ್ಲಿ ಸಂಜೆ ಸುಮಾರು 5.30 ರ ವೇಳೆಗೆ ಕಾಡುಕೋಣ ಮೆಯುತ್ತಿರುವುದನ್ನು ಗಮನಿಸಿದ್ದಾರೆ. ಸಂಜೆ ಮತ್ತೆ ತಿರುಗ ಅದು ತೋಟದಿಂದ ಕಾಡಿಗೆ ಹೋಗುತ್ತಿದ್ದ ವೇಳೆಗೆ ಕುಸುಮಾಧರ ಅವರ ತೋಟ ಮತ್ತು ಕಾಡಿನ ಮಧ್ಯೆ ಮಾಡಲಾಗಿದ್ದ ಆನೆ ಕಂದಕವನ್ನು ಹಾರಿದೆ ಎಂದು ಹೇಳಿದ್ದಾರೆ.
ಈ ವೇಳೆ ಆಯ ತಪ್ಪಿ ಕಾಡುಕೋಣವು ಆನೆ ಕಂದಕಕ್ಕೆ ಬಿದ್ದು, ಅದರ ಕಾಲುಗಳು ಕಂದಕದಲ್ಲಿದ್ದ ಕೆಸರಿನಲ್ಲಿ ಹೂತು ಹೋಗಿತ್ತು. ಮುಖ ಕೂಡಾ ಗುದ್ದಿ ನಿಂತಿತು. ಅದು ಒದ್ದಾಡಿದರೂ ಮೇಲೆ ಏಳಲಾಗದೇ ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಸ್ಥಳೀಯರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.