dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: 2023-24ನೇ ಸಾಲಿನಲ್ಲಿ ಹೊಸ ಸರಕಾರದ ಆರಂಭದ ತಿಂಗಳಿನಲ್ಲೇ ಶಾಲೆಗಳು ಆರಂಭಗೊಳ್ಳುತ್ತಿವೆ.
ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಕಳುಹಿಸಿದ ಹೆತ್ತವರ ನಿರೀಕ್ಷೆಯಂತೆ ಮಕ್ಕಳು ವಿದ್ಯಾವಂತರಾಗಿ ಹೊರಬರಬೇಕು.
ಇದರ ಮದ್ಯೆ ಕೋಮುವಾದ, ತಾರತಮ್ಯ ನಿಲುವು, ಮಾದಕ ವ್ಯಸನವು ನುಸುಳದಂತೆ ಸರಕಾರವು ಎಚ್ಚರವಹಿಸಬೇಕಿದೆ.
ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದೇವೆ ಎಂದು ಎಸ್ಕೆಎಸ್ಸೆಸ್ಸೆಫ್ ಟ್ರೆಂಡ್ ರಾಜ್ಯ ಚೇರ್ಮನ್ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.

ಶಾಲೆಯು ಅರಿವಿನ ಸಾಮ್ರಾಜ್ಯ, ಮಕ್ಕಳಿಗೆ ಜ್ಞಾನವನ್ನು ಪಡೆಯುವ ಪವಿತ್ರ ಸ್ಥಳವಾಗಿದೆ. ಮಕ್ಕಳಿಗೆ ಓದುವಿನ ಜೊತೆಗೆ ಪರಿಸರ, ಸಾಮರಸ್ಯ, ಸಮಯ ಪ್ರಜ್ಞೆಯ ನೈತಿಕ ಶಿಕ್ಷಣವನ್ನು ಒದಗಿಸುವುದು ಕಾಲದ ಬೇಡಿಕೆಯಾಗಿವೆ.
ಶಾಲಾ ಪರಿಸರವು ಸ್ವಚ್ಚತೆಯೊಂದಿಗೆ ಅಲ್ಲಿನ ನಿಯಮಗಳೆಲ್ಲವೂ ನ್ಯಾಯಯುತವಾಗಿಯೇ ಮುಂದುವರಿಯುವಂತೆ ಸಂಭಂದಪಟ್ಟ ಅಧಿಕಾರಿಗಳು ಗಮನಹರಿಸಬೇಕು.
ಕಳೆದ ವರ್ಷದಂತೆ ಶಾಲಾ ಕಾಲೇಜುಗಳಲ್ಲಿ ಕೋಮು ಭಾವನೆಗಳು ಹರಡದಂತೆ ಎಚ್ಚರವಹಿಸಬೇಕು.
ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಹೊರತಾಗಿ ಇನ್ಯಾವುದೇ ಅನಾವಶ್ಯಕ ಚಟುವಟಿಕೆಗಳು ನಡೆಸಿದರೆ ಶೀಘ್ರವೇ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.

'; } else { echo "Sorry! You are Blocked from seeing the Ads"; } ?>

ಮಕ್ಕಳು ನಮ್ಮ ಆಸ್ತಿ. ಅವರಿಗೆ ಉನ್ನತ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಂದೆ ತರಬೇಕು.
ಪ್ರತಿಯೊಬ್ಬರೂ ಶಿಕ್ಷಣ ಪಡೆಯುವಂತಾಗಬೇಕು.
ಶಿಕ್ಷಣ ಸಂಸ್ಥೆ, ಆಡಳಿತ ಸಮಿತಿ, ಅಧಿಕಾರಿಗಳು, ಸಂಬಂಧಪಟ್ಟ ಸಚಿವರು, ಶಾಸಕರು, ಶಿಕ್ಷಕರು, ಪೋಷಕರು ಸೇರಿದಂತೆ ಪ್ರತಿಯೊಬ್ಬರು ಶಿಕ್ಷಣದ ಅಭಿವೃದ್ದಿಯ ಜೊತೆ ಕೈ ಜೋಡಿಸಬೇಕಿದೆ ಎಂದು ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!