dtvkannada

ಬೆಂಗಳೂರು: ಸುನ್ನೀ ಸ್ಟೂಡೆಂಟ್ ಫೆಡರೇಷನ್ SSF ಇದರ ಗೋಲ್ಡನ್ ಫಿಫ್ಟಿ ಪ್ರಯುಕ್ತ ಕರ್ನಾಟಕ SSF ಹಮ್ಮಿಕೊಂಡ ಬೃಹತ್ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ನಗರದ ಅರಮನೆ ಮೈದಾನದಲ್ಲಿ ಇಂದು ನಡೆಯಲಿದೆ.

ಕಾರ್ಯಕ್ರಮಕ್ಕೆ ಕರ್ನಾಟಕ ಸರಕಾರದ ವಿಶೇಷ ಅತಿಥಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖ್ ಅಬೂಬಕ್ಕರ್ ಅಹ್ಮದ್ ಕಾಂತಪುರಂ ಭಾಗವಹಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರು ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಎ.ಪಿ ಉಸ್ತಾದ್ ಮುಖ್ಯಪ್ರಭಾಷಣಗೈಯಲಿದ್ದಾರೆ.

ಇನ್ನು ಅನಾರೋಗ್ಯ ಹಿನ್ನಲೆ ವಿಶ್ರಾಂತಿಯಲ್ಲಿದ್ದ ಸುಲ್ತಾನುಲ್ ಉಲಮಾರವರು ತದ ನಂತರ ಇದೇ ಮೊದಲ ಬಾರಿಯಾಗಿದೆ ರಾಜ್ಯ ರಾಜಧಾನಿಗೆ ಭೇಟಿ ನೀಡುತ್ತಿರುವುದು.
ಸರಕಾರದ ಭದ್ರತೆ,ವಸತಿ, ಸಾರಿಗೆ ಹಾಗು ಸೂಕ್ತ ರಕ್ಷಣಾ ವ್ಯವಸ್ಥೆಯನ್ನು ಉಸ್ತಾದರಿಗೆ ಸರಕಾರ ಭರಿಸಲಿದೆ.
ಇನ್ನು ತನ್ನ ನಾಯಕನನ್ನು ಭರ ಮಾಡಿಕೊಳ್ಳಲು ಲಕ್ಷಾಂತರ ಕಾರ್ಯಕರ್ತರು ಇದೀಗಾಗಲೇ ಅರಮನೆ ಮೈದಾನವನ್ನು ತಲುಪಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!