dtvkannada

ಸವಣೂರು: ಇಲ್ಲಿನ ಪ್ರತಿಷ್ಠಿತ ಯುವ ಸಂಘಟನೆಯಾದ ಸವಣೂರು ಯೂತ್ ಫ್ರೆಂಡ್ಸ್ ರಿ. ಇದರ ಮಹಾಸಭೆಯ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಎಸ್.ವೈ.ಎಫ್ ಅಧ್ಯಕ್ಷ ಯಾಕೂಬ್ ಸವಣೂರು ವಹಿಸಿದ್ದರು. ಸಭೆಯಲ್ಲಿ ಸಾಹಿತಿ ಹೈದರ್ ಅಲಿ ಐವತ್ತೊಕ್ಲು, ಹಿರಿಯ ಉದ್ಯಮಿ ಅಬೂಬಕ್ಕರ್ ಹಾಜಿ ಆರ್ತಿಕೆರೆ, ಉದ್ಯಮಿ ಶರೀಫ್ ಸಿ.ಹೆಚ್, ಸವಣೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಎಂ ಎಚ್ ಹನೀಫ್, ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಕಾರ್ಯದರ್ಶಿ ಅಶ್ರಫ್ ಬಿ.ಎಂ ಉಪಸ್ಥಿತರಿದ್ದರು.

ಸಭೆಯಲ್ಲಿ ಕಳೆದ ಸಾಲಿನ ವಾರ್ಷಿಕ ವರದಿ ವಾಚಿಸಲಾಯಿತು. ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮುಂದಿನ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಹೈದರ್ ಅಲಿ ಐವತ್ತೊಕ್ಲು ಅವರನ್ನು ನೇಮಿಸಲಾಯಿತು.

ಅಧ್ಯಕ್ಷರಾಗಿ ಶರೀಫ್ ಸಿ.ಹೆಚ್, ಉಪಾಧ್ಯಕ್ಷರಾಗಿ ಫಾರೂಕ್ ಬಿ.ಎಂ ಸ್ಟೋರ್, ಕಾರ್ಯದರ್ಶಿಯಾಗಿ ಸಫ್ವಾನ್ ಸವಣೂರು, ಜೊತೆ ಕಾರ್ಯದರ್ಶಿಯಾಗಿ ಹೈದರ್ ಎಸ್.ಆರ್, ಕೋಶಾಧಿಕಾರಿಯಾಗಿ ಸಹೀರ್ ರೋಯಲ್, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದೀಕ್ ಚಾಪಳ್ಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಾಕೂಬ್ ಸವಣೂರು, ಶಾಫಿ ಟೈಲರ್, ಖಾಲಿದ್ ಬಸ್ತಿ, ನಿಝಾರ್ ಅಜಾ, ಹಂಝತ್‌ ಆರಿಗಮಜಲು ಆಯ್ಕೆಗೊಂಡರು. ಗೌರವ ಸಲಹೆಗಾರರಾಗಿ ಅಬೂಬಕ್ಕರ್ ಹಾಜಿ ಆರ್ತಿಕೆರೆ, ಹನೀಫ್ ಎಂ ಎಚ್, ರಫೀಕ್ ಟಾಸ್ಕೋ, ಅಶ್ರಫ್ ಚಾಪಲ್ಲ, ಅಶ್ರಫ್ ಬಿ.ಎಂ ನೇಮಕಗೊಂಡರು. ಸಫ್ವಾನ್ ಸವಣೂರು ಸ್ವಾಗತಿಸಿ, ವಂದಿಸಿದರು.

By dtv

Leave a Reply

Your email address will not be published. Required fields are marked *

error: Content is protected !!