ಮಾಣಿ : ದಾರುಲ್ ಇರ್ಶಾದ್ ಎಜ್ಯುಕೇಶನಲ್ ಸೆಂಟರ್ ಮಾಣಿ,ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಅಜ್ಮೀರ್ ಮೌಲಿದ್ ಏರ್ವಾಡಿ ಶುಹದಾಗಳ ನೇರ್ಚೆ,ಖತ್ಮುಲ್ ಕುರ್ಆನ್ ಮಜ್ಲಿಸ್,ಮತ್ತು ಸನದುದಾನ ಮಹಾ ಸಮ್ಮೇಳನವು ಜನವರಿ 18 ಇದೇ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಮಿತ್ತೂರು ಕೆಜಿಎನ್ ಕ್ಯಾಂಪಸ್ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
![](https://dtvkannada.in/wp-content/uploads/2024/01/976b58dc-2b95-47f5-8ad3-d6b4d25b10b5-1-740x1024.jpg)
ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ,ಸಯ್ಯಿದ್ ಫಝಲ್ ಕೋಯಮ್ಮ ಕೂರತ್ ತಂಙಳ್,ಸಯ್ಯಿದ್ ಸ್ವಲಾಹುದ್ದೀನ್ ಅಲ್ ಅದನಿ,ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದರ ಸಹಿತ ಹಲವಾರು ಸಯ್ಯಿದ್ ಗಳು ನೂರಾರು ಉಲಮಾ ಉಮರಾ ಗಳು,ನೇತಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು,ಎಂದು ಸ್ವಾಗತ ಸಮಿತಿ ಪ್ರಕಟಣೆ ನೀಡಿದೆ.