dtvkannada

ಪುತ್ತೂರು: ಸಂಪ್ಯದಿಂದ ಪುತ್ತೂರು ಕಡೆಗೆ ಬರುತ್ತಿದ್ದಂತಹ ದ್ವಿಚಕ್ರ ವಾಹನಕ್ಕೆ ರಿಕ್ಷಾದವನು ಅಪಘಾತವೆಸಗಿ ಪರಾರಿಯಾದ ಘಟನೆ ಇದೀಗ ಮುಕ್ರಂಪಾಡಿಯಲ್ಲಿ ಸಂಭವಿಸಿದೆ.

ಹಿಟ್ ಆಂಡ್ ರನ್ ಮಾಡಿ ತಪ್ಪಿಸಿಕೊಂಡ ರಿಕ್ಷಾ ಚಾಲಕ ಮುಕ್ರಂಪಾಡಿಯಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ಸಂಪ್ಯ ಮಸೀದಿಯ ಬಳಿ ಇನ್ನೋರ್ವನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.

ಮುಕ್ರಂಪಾಡಿಯಲ್ಲಿ ಮತ್ತು ಸಂಪ್ಯದಲ್ಲಿ ಅಪಘಾತಕ್ಕೆ ಒಳಗಾದ ನಾಲ್ವರು ಯುವಕರನ್ನು ಸರಕಾರಿ ಆಸ್ಪತ್ರೆ ಹಾಗೂ ಇನ್ನೋರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಟಿ ಹಾಸ್ಪಿಟಲಿಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ರಸ್ತೆಯಲ್ಲಿ ಅಪಘಾತವಾಗಿ ಬಿದ್ದು ಹೊರಳಾಡುತ್ತಿದ್ದ ಯುವಕನನ್ನು ಅದೇ ದಾರಿಯಿಂದ ಬರುತ್ತಿದ್ದ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಸವನೂರು ಮತ್ತು ಆಟೋ ಚಾಲಕರಾದ ಹಮೀದ್‌ರವರು ಸಂಪ್ಯರವರು ತಕ್ಷಣ ಕಾರ್ಯಪ್ರವರ್ತರಾಗಿ ಆಸ್ಪತ್ರೆಗೆ ದಾಖಲಿಸಿದ್ದು ಇದೀಗ ಆಸ್ಪತ್ರೆಯ ಬಳಿ ಸೇರಿದಂತಹ ಸಾರ್ವಜನಿಕರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯ ಕೂಡ ಕಂಡು ಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!