ಬಳ್ಳಾರಿ: ಬೆನ್ನೂರಿನಲ್ಲಿ ಮದ್ರಸಾ ಶಿಕ್ಷಣದಲ್ಲಿ ಕಾರ್ಯನಿರತರಾಗಿದ್ದ ಅಧ್ಯಾಪಕರೋರ್ವರು ಅನಾರೋಗ್ಯ ಹಿನ್ನಲೆ ಹಟಾತ್ ಮರಣ ಹೊಂದಿದ ಘಟನೆ ಇದೀಗ ಸಂಭವಿಸಿದೆ.
ಮೃತಪಟ್ಟ ಶಿಕ್ಷಕನನ್ನು ಮಂಗಳೂರು ಉಳ್ಳಾಲ ನಿವಾಸಿ ಝೈನುದ್ದೀನ್ ಮರ್ಝೂಖಿ ಸಹದಿ (27) ಎಂದು ಗುರುತಿಸಲಾಗಿದೆ.
ಶುಕ್ರವಾರದ ವಿಶೇಷ ಪ್ರಾರ್ಥನೆಗೆ ಸಜ್ಜುಗೊಳ್ಳುತ್ತಿದ್ದಾಗ ಹಟಾತ್ ಆಗಿ ಉಂಟಾದ ಅನಾರೋಗ್ಯ ಹಿನ್ನಲೆ ಸ್ಥಳದಲ್ಲೇ ಕುಸಿದು ಬಿದ್ದು ಮರಣ ಹೊಂದಿದಾಗಿ ತಿಳಿದುಬಂದಿದೆ.
ಮಂಗಳೂರುವಿನಿಂದ ಬಳ್ಳಾರಿ ಕಡೆ ಹೋಗಿ ಶಿಕ್ಷಕ ವೃತ್ತಿ ನಡೆಸುತ್ತಿದ್ದ ಮರ್ಝೂಖಿ ರವರು ಸೌಮ್ಯ ಸ್ವಭಾವದ ಮತ್ತು ಎಲ್ಲರೂ ಮೆಚ್ಚುವಂತಹ ವ್ಯಕ್ತಿತ್ವವಾಗಿದ್ದರು.