dtvkannada

ಮಂಗಳೂರು: ವರ್ಷಗಳ ಹಿಂದೆ ಟಾರ್ಗೆಟ್ ಇಲ್ಯಾಸ್ ರನ್ನು ಬರ್ಬರವಾಗಿ ಹತ್ಯೆಯಾಗಿದ್ದು ಪ್ರಕರಣದ ಆರೋಪಿಯಾಗಿದ್ದ ರೌಡಿಶೀಟರ್ ಕಡಪ್ಪರ ಸಮೀರ್ ಮೇಲೆ ಇದೀಗ ತಲ್ವಾರ್ ದಾಳಿ ನಡೆದಿದ್ದು ಇದೀಗ ಮೃತದೇಹ ಪತ್ತೆಯಾಗಿದೆ.

ತನ್ನ ತಾಯಿ ಜೊತೆ ಊಟಕ್ಕೆಂದು ರೆಸ್ಟೋರೆಂಟ್ ಗೆ ತೆರಳುತ್ತಿದ್ದಾಗ ರೌಡಿ ಶೀಟರ್ ಮೇಲೆ ತಲ್ವಾರ್ ದಾಳಿಯಾದ ಘಟನೆ ಕಲ್ಲಾಪುವಿನಲ್ಲಿ ನಡೆದಿದೆ.

ಟಾರ್ಗೆಟ್ ಇಲ್ಯಾಸ್ ಕೊಲೆ ಆರೋಪಿ ಕಡಪ್ಪರ ಸಮೀರ್ ರವರನ್ನು ದುಷ್ಕರ್ಮಿಗಳು ತನ್ನ ತಾಯಿಯ ಕಣ್ಣಿನೆದುರಲ್ಲೇ ಅಟ್ಟಾಡಿಸಿ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಮೀರ್ ಓಡಿ ಪರಾರಿಯಾಗಿದ್ದ ಇದೀಗ ಸ್ವಲ್ಪ ದೂರದಲ್ಲಿ ಮೃತದೇಹ ಸಿಕ್ಕಿದ್ದು ಸ್ಥಳದಲ್ಲಿ ನೂರಾರು ಸಾರ್ವಜನಿಕರು ಸೇರಿಕೊಂಡಿದ್ದಾರೆ.

ದರೋಡೆ ಪ್ರಕರಣದಲ್ಲಿ ಒಂದು ತಿಂಗಳ ಹಿಂದೆ ಜೈಲು ಸೇರಿಕೊಂಡಿದ್ದ ಸಮೀರ್ ಮತ್ತು ತಂಡ ಕಳೆದ ಎರಡು ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದು ಇದೀಗ ತಲ್ವಾರ್ ದಾಳಿಯಿಂದ ಬರ್ಬರವಾಗಿ ಹತ್ಯೆಯಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ತನಿಖೆ ಮುಂದುವರಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!