ಮಂಗಳೂರು: ರಹೀಮ್ ಹತ್ಯೆ ಅತ್ಯಂತ ಆತಂಕಕಾರಿ ಮತ್ತು ಖಂಡನೀಯವಾಗಿದೆ ಎಂದು ಉಳ್ಳಾಲ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಹೇಳಿದರು.

ದುಷ್ಕರ್ಮಿಗಳಿಂದ ಹತ್ಯೆಯಾದ ರಹೀಮ್ ಹತ್ಯೆಯನ್ನು ಖಂಡಿಸಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದಲ್ಲೇ ನೋವನ್ನು ಹಂಚಿಕೊಂಡಿರುವ ಉಸ್ತಾದ್ ನಾಡಿನ ಶಾಂತಿಗಾಗಿ ಎಲ್ಲರೂ ಜೊತೆಯಾಗಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೊಲೆಗಳು ಅತ್ಯಂತ ಆತಂಕಕಾರಿ ಮತ್ತು ಖಂಡನೀಯವಾಗಿವೆ. ಧರ್ಮಸೌಹಾರ್ದತೆ ಮತ್ತು ಪರಸ್ಪರ ಸಹಕಾರವೇ ನಮ್ಮ ನಾಡಿನ ಗುರುತಾಗಿದೆ. ದೇಶದ ಸ್ವಾತಂತ್ರ್ಯವನ್ನು ಹಾಗೂ ನಾವು ಇಂದು ಅನುಭವಿಸುತ್ತಿರುವ ಎಲ್ಲಾ ಸಾಧನೆಗಳೂ ಎಲ್ಲಾ ವರ್ಗದ ಜನರು ಒಟ್ಟಾಗಿ ನಿಂತು ಗಳಿಸಿದವು. ಅದಕ್ಕೆ ಕಳಂಕ ತರಲು ಎಂದಿಗೂ ಅವಕಾಶ ನೀಡಬಾರದು.
ಕೊಲೆಗಳು ಮತ್ತು ಹಿಂಸಾತ್ಮಕ ಘಟನೆಗಳು ನಾಡಿನ ಶಾಂತಿಗೆ ಮಾತ್ರವಲ್ಲ, ಜನರ ಭವಿಷ್ಯಕ್ಕೂ ಕಪ್ಪುಛಾಯೆ ಎಳೆಯುತ್ತವೆ. ಹಿಂಸೆಯನ್ನು ಕಠಿಣವಾಗಿ ಖಂಡಿಸಲು ಎಲ್ಲರೂ ಮುಂದೆ ಬರಬೇಕು. ರಾಜಕೀಯ ಪಕ್ಷಗಳು ಹಾಗೂ ಧರ್ಮ ನಾಯಕರು ಒಂದಾಗಿ ಶಾಂತಿಯನ್ನು ಪುನಃಸ್ಥಾಪಿಸಬೇಕು. ಇನ್ನು ಮುಂದೆ ಯಾರ ಜೀವವೂ ಹಿಂಸೆಯಿಂದ ಕಳೆದು ಹೋಗಬಾರದು. ಅಲ್ಲಾಹನು ನಮ್ಮ ನಾಡಿನಲ್ಲಿ ಐಕ್ಯತೆಯನ್ನೂ ಶಾಂತಿಯನ್ನೂ ಸ್ಥಿರವಾಗಿಡಲಿ,
ಎಂದು ತಮ್ಮ ಮುಖ ಪುಟದಲ್ಲಿ ಬರೆದುಕೊಂಡಿದ್ದಾರೆ.