dtvkannada

ಪಿರಿಯಾಪಟ್ಟಣ: ತಾಯಿ ಸಾವನ್ನಪ್ಪಿದ ದುಃಖದಲ್ಲಿಯೇ ಮಗನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿದ ಮನಃಕಲಕುವ ಘಟನೆ ಜರುಗಿದೆ.

ಪಟ್ಟಣದ ಪೋಸ್ಟ್ ಆಫೀಸ್ ರಸ್ತೆ ನಿವಾಸಿ ನಿವೃತ್ತ ಬಿಎಸ್‌ಎನ್‌ಎಲ್ ನೌಕರ ಬಿಜೆಪಿ ಮುಖಂಡ ಪುಟ್ಟಸ್ವಾಮಿ ಅವರ ಮಗ ಬಿ.ಪಿ.ಅರ್ಜುನ್ (29) ಆತ್ಮಹತ್ಯೆ ಮಾಡಿಕೊಂಡವ. ಈತನ ಶವ ಗುರುವಾರ ಸಂಜೆ ಪಟ್ಟಣದ ಅರಸನ ಕೆರೆಯ ಸೇತುವೆ ಬಳಿ ಪತ್ತೆಯಾಗಿದೆ.

ಸೆ.15ರಂದು ಈತನ ತಾಯಿ ಎಸ್.ಸುಜಾತ ಹೃದಯಾಘಾತದಿಂದ ನಿಧನರಾಗಿದ್ದರು. ತಾಯಿ ಶವಸಂಸ್ಕಾರವನ್ನು ಬಾರಸೆಯಲ್ಲಿ ಮುಗಿಸಿ ಬಂದ ಅರ್ಜುನ್ ತೀವ್ರವಾಗಿ ಮನನೊಂದಿದ್ದು ವಾಟ್ಸ್ ಅಪ್‌ ಸ್ಟೇಟಸ್’ನಲ್ಲಿ ತಾಯಿಯ ಜೋತೆ ತಾನು ಇಲ್ಲ ಎಂಬಂತೆ ಹಾಕಿದ್ದನೆಂದು ಸ್ನೇಹಿತರು ತಿಳಿಸಿದ್ದಾರೆ.

ತಾಯಿಯ ಸಾವಿನ ದುಃಖ ತಡೆಯದೆ ತೀವ್ರ ಮನನೊಂದಿದ್ದ ಈತ ಸಂಜೆ ಮನೆಗೆ ಬಾರದೆ ಇರುವುದನ್ನು ಕಂಡು ಸೆ.16ರಂದು ತಂದೆ ಬಿ.ಎಲ್.ಪುಟ್ಟಸ್ವಾಮಿ ಮತ್ತು ಕುಟುಂಬದವರು ಈತನಿಗಾಗಿ ಹುಡುಕಾಟ ನಡೆಸಿದ್ಧಾರೆ. ಈ ವೇಳೆ ಬಿ.ಪಿ.ಅರ್ಜು

By dtv

Leave a Reply

Your email address will not be published. Required fields are marked *

error: Content is protected !!