ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಸಾಂಸ್ಕೃತಿಕ ಹಾಗೂ ಪ್ರತಿಭಾನ್ವೇಷಣಾ ಕಾರ್ಯಕ್ರಮ ಪ್ರತಿಭೋತ್ಸವ – ೨೧ ಇದರ ಪುತ್ತೂರು ಡಿವಿಶನ್ ನಿರ್ವಹಣಾ ಸಮಿತಿಯ ಚೇರ್ಮೆನ್ ಆಗಿ ಸೈಫುಲ್ಲಾ ಸಅದಿ ಬನ್ನೂರು, ಕನ್ವೀನರ್ ಶಿಹಾಬುರ್ರಹ್ಮಾನ್ ಹಸನ್ ನಗರ ಆಯ್ಕೆಯಾಗಿದ್ದಾರೆ.
ವೈಸ್ ಚೇರ್ಮೆನ್ ಆಗಿ ರಫೀಕ್ ಬಾಅಸನಿ ರೆಂಜ, ವೈಸ್ ಕನ್ವೀನರ್ ಆಗಿ ಸಮೀರ್ ಸಖಾಫಿ ರೆಂಜಲಾಡಿ, ಫಿನಾನ್ಸಿಯಲ್ ಕಾರ್ಯದರ್ಶಿಯಾಗಿ ಶಫೀಕ್ ಸಅದಿ ಈಶ್ವರಮಂಗಳ, ಮುಹ್ಸಿನ್ ಕಟ್ಟತ್ತಾರು, ಖಲಂದರ್ ಪಾಟ್ರಕೋಡಿ ಹಾಗೂ ಸದಸ್ಯರುಗಳಾಗಿ ಸಯ್ಯಿದ್ ಸಾಬಿತ್ ತಂಙಳ್ ಪಾಟ್ರಕೋಡಿ, ಹಂಝ ಸಅದಿ ಕೂರತ್, ಕರೀಂ ಬಾಅಸನಿ ರೆಂಜ, ಸಲಾಂ ಹನೀಫಿ ಕಬಕ, ನೌಶಾದ್ ಕೂರತ್ ಇವರನ್ನು ಆಯ್ಕೆ ಮಾಡಲಾಯಿತು.