dtvkannada

ಪುತ್ತೂರು: ವರ್ತಕರ ಸಂಘ(ರಿ) ಕುಂಬ್ರ ಇದರ ಆಶ್ರಯದಲ್ಲಿ ಬ್ಲಡ್ ಹೆಲ್ಪ್’ಲೈನ್ ಕರ್ನಾಟಕ(ರಿ) ಇದರ ಸಹಭಾಗಿತ್ವದಲ್ಲಿ ದಿನಾಂಕ 28-11-2021 ರ ಭಾನುವರದಂದು ಬೆಳಿಗ್ಗೆ 9ಗಂಟೆಗೆ ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ನಡೆಯುವ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಇಂದು ಕುಂಬ್ರದಲ್ಲಿ ಬಿಡುಗಡೆಗೊಳಿಸಲಾಯಿತು.

ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ವರ್ತಕರ ಸಂಘ (ರಿ) ಕುಂಬ್ರ ಇದರ ಸ್ಥಾಪಕಧ್ಯಕ್ಷರಾದ ಶ್ಯಾಮ್ ಸುಂದರ್ ರೈ ಕೊಪ್ಪಳ, ವರ್ತಕರ ಸಂಘ (ರಿ)ಕುಂಬ್ರ ಇದರ ಅಧ್ಯಕ್ಷರಾದ ಮಾಧವ ರೈ.ಎಸ್, ಪ್ರ.ಕಾರ್ಯದರ್ಶಿಯಾದ ಅಝರ್ ಷಾ ಕುಂಬ್ರ, ಮಾಜಿ ಅಧ್ಯಕ್ಷರಾದಂತಹ ಮೆಲ್ವೀನ್ ಮೊಂತೆರೋ, ದಿವಾಕರ ಶೆಟ್ಟಿ ಸದಸ್ಯರಾದ ಉದಯ ಆಚಾರ್ಯ, ಭವ್ಯ ರೈ, ಶ್ರುತಿಚಂದ್ರ, ಸೂರಜ್ ಭಟ್, ನಿತಿಶ್ ಶಾಂತಿವನ, ಪದ್ಮನಾಭ ಆಚಾರ್ಯ ಉಪಸ್ಥಿತರಿದ್ದರು.

ಕೋವಿಡ್ ಮುನ್ನೆಚ್ಚರಿಕಾ ಕ್ರಮದೊಂದಿಗೆ ನಡೆಯುವ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಮನವಿ ಮಾಡಿಕೊಂಡರು.

By dtv

Leave a Reply

Your email address will not be published. Required fields are marked *

error: Content is protected !!