dtvkannada

ಪುತ್ತೂರು: ಕಳೆದೆರಡು ದಿನಗಳಿಂದ ಪುತ್ತೂರಿನ ಕೊಂಬೆಟ್ಟು ಸರಕಾರಿ ಕಾಲೇಜಿನಲ್ಲಿ ಅಮಾಯಕ ಮುಸ್ಲಿಂ ವಿಧ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಶೀಘ್ರ ಬಂದಿಸಲು ಸೆಕ್ಯೂಲರ್ ಯೂತ್ ಫಾರಂ(SYF) ವತಿಯಿಂದ ಪುತ್ತೂರು ನಗರ ಠಾಣೆಗೆ ಮನವಿ ಸಲ್ಲಿಸಲಾಯಿತು.

ಸಂಘಪರಿವಾರ ನೀಡಿದ ತ್ರಿಶೂಲದಿಂದ ಪ್ರೇರಿತರಾದ ಕೆಲವರು ಅಮಾಯಕ ವಿಧ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಪುತ್ತೂರಿನಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದು. ಇಂತಹ ಆರೋಪಿಗಳನ್ನು ಪೋಲಿಸ್ ಇಲಾಖೆ ತಕ್ಷಣ ಬಂದಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು SYF ಮನವಿ ಸಲ್ಲಿಸಿದೆ.

ಈ‌ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಮೋನು ಬಪ್ಪಳಿಗೆ, ರಶೀದ್ ಮುರ, ಅಲೀ ಪರ್ಲಡ್ಕ, ರಹಿಮಾನ್ ಸಂಪ್ಯ, ಇರ್ಶಾದ್ ಸಾಲ್ಮರ, ತವೀದ್ ಸಾಲ್ಮರ, ಷರೀಫ್ ಸಾಲ್ಮರ, ಆಸೀಫ್ ಬಪ್ಪಳಿಗೆ, ಇಬ್ಬ ಬಪ್ಪಳಿಗೆ, ಸಮದ್, ಜುನೈದ್ ಸಾಲ್ಮರ ಮುಂತಾದವರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!