dtvkannada

ಉಳ್ಳಾಲ: ಡಿಸೆಂಬರ್ 1 ರಂದು ಅಲಂಕಾರುಗುಡ್ಡೆ ಪ್ರದೇಶದಲ್ಲಿ ನಿನ್ನೆ ಬೆಳಿಗ್ಗೆ ವಿದ್ಯಾರ್ಥಿನಿ ಶಾಲೆಗೆ ತೆರಳುವ ಸಂದರ್ಭ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಆರೋಪಿ ಕೆ ಸಿ ರೋಡು ನಿವಾಸಿ ಅಬ್ದುಲ್ ರಾಶಿಕ್ ನನ್ನು ಸಿಸಿಬಿ ಪೊಲೀಸ್ ತಂಡ ವಶಕ್ಕೆ ಪಡೆದಿದ್ದಾರೆ.



ಈ ಹಿಂದೆಯೂ ಉಚ್ಚಿಲ ಸಮೀಪ ಬಾಲಕಿ ಮೇಲೆ ಕೈ ಹಾಕಿದ್ದ ಭೂಪ ಈತನ ಮೇಲೆ ಉಳ್ಳಾಲ ಠಾಣೆಯಲ್ಲಿ ಒಟ್ಟು ಎರಡು ಪ್ರಕರಣ ದಾಖಲಾಗಿದ್ದು ಹಲವು ಇಂತಹ ಕೃತ್ಯ ನಡೆಸಿರುವ ಕುರಿತು ಸಿಸಿಬಿಯಿಂದ ವಿಚಾರಣೆ ನಡೆಸುತ್ತಿದ್ದಾರೆ

ಡಿಸೆಂಬರ್ 1 ರ ಬುಧವಾರ ಬೆಳಗ್ಗೆ ತಲಪಾಡಿಯ ಆಲಂಕಾರುಗುಡ್ಡೆ ಪ್ರದೇಶದಲ್ಲಿ ಶಾಲೆಗೆ ತೆರಳುತ್ತಿದ್ದಾಗ ಸ್ಕೂಟರ್ ನಲ್ಲಿ ಬಂದಿದ್ದ ಈತ ಆಕೆಯ ಕೈ ಹಿಡಿದು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದು ಬಾಲಕಿ ಕಿರುಚಾಡುತ್ತಿದ್ದಂತೆ ಆರೋಪಿ ರಾಶಿಕ್ ಪರಾರಿಯಾಗಿದ್ದ.

By dtv

Leave a Reply

Your email address will not be published. Required fields are marked *

error: Content is protected !!