dtvkannada

ಬೆಂಗಳೂರು: ವಾರದ ಹಿಂದೆ ಸದಾಶಿವನಗರದ ಪಬ್ವೊಂದರಲ್ಲಿ ಕಿರಿಕ್ ಕೀರ್ತಿ ಅವರ ಮೇಲೆ ಹಲ್ಲೆ ನಡೆದಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕಿರಿಕ್ ಕೀರ್ತಿ ದೂರು ನೀಡಿದ್ದರು. ಅದರ ಅನ್ವಯ ತನಿಖೆ ಆರಂಭಿಸಿದ ಸದಾಶಿವನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಈಗ ಬಂಧಿಸಿದ್ದಾರೆ.



ಹಲ್ಲೆ ಮಾಡಿದ ಆರೋಪಿಗಳಾದ ಅನಿಲ್, ವಿಜಯ್, ಅಜಯ್ ಸೇರಿ ಐವರು ವ್ಯಕ್ತಿಗಳು ಪೊಲೀಸರು ಬಂಧಿಸಿದ್ದಾರೆ.

ಡಿ.2ರ ಮಧ್ಯರಾತ್ರಿ ಈ ಘಟನೆ ನಡೆದಿತ್ತು. ಪಬ್ನಲ್ಲಿ ನಡೆದ ಗಲಾಟೆಯಲ್ಲಿ ಕಿರಿಕ್ ಕೀರ್ತಿಯ ಅವರ ತಲೆಗೆ ಬಿಯರ್ ಬಾಟಲ್ನಿಂದ ಹೊಡೆಯಲಾಗಿತ್ತು. ಕೂಡಲೇ ಅವರು ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದರು.

ಸದಾಶಿವನಗರದ ಪಬ್ವೊಂದಕ್ಕೆ ಕಿರಿಕ್ ಕೀರ್ತಿ ತೆರಳಿದ್ದರು. ಅವರು ಕುಳಿತಿದ್ದ ಪಕ್ಕದ ಟೇಬಲ್ನಲ್ಲಿ ಅನಿಲ್, ವಿಜಯ್, ಅಜಯ್ ಹಾಗೂ ಸ್ನೇಹಿತರು ಕುಳಿತಿದ್ದರು. ಈ ವೇಳೆ ಅನಿಲ್ ತನಗೆ ಕಿರಿಕ್ ಕೀರ್ತಿಯ ಪರಿಚಯವಿದೆ ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಹಾಗಿದ್ದರೆ ಹೋಗಿ ಮಾತನಾಡಿಸು ಎಂದು ಜೊತೆಯಲ್ಲಿದ್ದ ಸ್ನೇಹಿತರು ಒತ್ತಾಯಿಸಿದರು. ಈ ವೇಳೆ ಕಿರಿಕ್ ಕೀರ್ತಿ ಬಳಿ ಬಂದು ನಾನ್ಯಾರು ಗೊತ್ತಾಯ್ತಾ ಎಂದು ಅನಿಲ್ ಕೇಳಿದ. ನನಗೆ ಗೊತ್ತಿಲ್ಲ ಎಂದು ಕೀರ್ತಿ ಉತ್ತರಿಸಿದರು.

ಈ ಎಲ್ಲ ಘಟನೆಗಳನ್ನು ಅವರ ಸ್ನೇಹಿತರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ವಿಡಿಯೋ ಯಾಕೆ ಮಾಡಿಕೊಳ್ಳುತ್ತಾ ಇದ್ದೀರಿ ಎಂದು ಕಿರಿಕ್ ಕೀರ್ತಿ ಪ್ರಶ್ನಿಸಿದ್ದರು. ಈ ವೇಳೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಐವರು ಎಸ್ಕೇಪ್ ಆಗಿದ್ದರು. ಇದೀಗ ಐವರನ್ನು ಪೊಲೀಸರು ಬಂಧಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!