ಬಂಟ್ವಾಳ: ಮುಂಬೈನಲ್ಲಿ ನಡೆದ ಲಾರಿ ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ವಿಟ್ಲದ ಮಾಮೇಶ್ವರ ಕಟ್ಟೆ ಬಳಿಯ ನವಗ್ರಾಮ ನಿವಾಸಿ ಮೃತಪಟ್ಟ ಘಟನೆ ನಡೆದಿದೆ.
![](http://dtvkannada.in/wp-content/uploads/2021/12/IMG-20211213-WA0039.jpg)
ಧರ್ಮ(45) ರವರು ಮೃತ ದುರ್ದೈವಿ.
ಧರ್ಮ ಅವರು ಮುಂಬೈನಲ್ಲಿ ಲಾರಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಲಾರಿ ಅಪಘಾತವಾಗಿ ಮೃತ ಪಟ್ಟಿದ್ದಾರೆ.
ಮೃತರು ಪತ್ನಿ ಮಮತಾ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಊರಿಗೆ ಮೃತದೇಹ ತರುವ ವ್ಯವಸ್ಥೆಯಾಗುತ್ತಿದೆ ಎಂದು ಬಲ್ಲಮೂಲಗಳು ತಿಳಿಸಿವೆ.