ಮಂಜೇಶ್ವರ: ಇಲ್ಲಿನ ಪ್ರತಿಷ್ಠಿತ ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ) ಕೆದಂಬಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮವು ಬೈಲ್ ಬ್ರದರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಹಾರಿಸ್ ಕೆದಂಬಾಡಿ ಅವರು ನೆರೆದವರನ್ನು ಸ್ವಾಗತಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿದ್ದೀಕ್ ಖತರ್ ಅವರು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು.
![](http://dtvkannada.in/wp-content/uploads/2021/12/IMG-20211230-WA0077-1024x387.jpg)
ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಖಲೀಲ್ RST, ಅಧ್ಯಕ್ಷರಾಗಿ ಹಾರಿಸ್ ಕೆದಂಬಾಡಿ, ಉಪಾಧ್ಯಕ್ಷರಾಗಿ ಅನ್ಸಾರ್ ಖತರ್, ಪ್ರಧಾನ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಕೆದಂಬಾಡಿ ಗುಜರಾತ್, ಕಾರ್ಯದರ್ಶಿಯಾಗಿ ಫರ್ವಾಝ್ ದುಬೈ, ಕೋಶಾಧಿಕಾರಿಯಾಗಿ ಸಾದಿಕ್ ಖತರ್, ಕಾರ್ಯಕಾರಿಣಿ ಸದಸ್ಯರಾಗಿ ಸಿದ್ದೀಕ್ ಖತರ್, ಸಲಾಮ್ ಕೆದಂಬಾಡಿ, ಫವಾಝ್ ಕೆದಂಬಾಡಿ, ಹನೀಫ್ ಬಿ.ಎಮ್, ಯೂಸುಫ್ ಹಾಜಿ , ನವಾಝ್ ಬಹ್ರೇನ್, ಖಲೀಲ್ ಬಹ್ರೇನ್, ಅಶ್ರಫ್ ಮುಡಿಮಾರ್, ಇಲ್ಯಾಸ್ ಅಬುಧಾಬಿ, ಝಕರಿಯಾ ಖತರ್, ಸಲಾಮ್ ಮಸ್ಕತ್, ಇಬ್ರಾಹಿಂ ಖತರ್, ಆದಿಲ್ ಕೆದಂಬಾಡಿ, ಮನ್ಸೂರ್ ದುಬೈ, ಕಲಂದರ್ ಖತರ್ ಅವರು ಆಯ್ಕೆಯಾದರು.
ಕೊನೆಯಲ್ಲಿ ಇಮ್ತಿಯಾಝ್ ಕೆದಂಬಾಡಿ ಅವರು ಧನ್ಯವಾದಗೈದರು.
![](http://dtvkannada.in/wp-content/uploads/2021/12/IMG-20211230-WA0077-1024x387.jpg)