ಮಾಣಿ: ಇಲ್ಲಿಗೆ ಸಮೀಪದ ಬುಡೋಳಿ ಎಂಬಲ್ಲಿ ಅಂಗಡಿ ಕಟ್ಟಡವನ್ನು ಬಾಡಿಗೆ ಕೊಟ್ಟು ಮುಂಗಡ ಪಾವತಿಯನ್ನು ಸ್ವೀಕರಿಸಿ ನಂತರ ಅದನ್ನು ಕೊಡದೆ ಕೇಳಿದಾಗ ಒಬ್ಬನನ್ನೆ ಮನೆಗೆ ಕರೆಸಿ ಮಾರಣಾಂತಿಕ ಹಲ್ಲೆ ನಡೆಸಿರುವಂತದ್ದು ಬೆಳಕಿಗೆ ಬಂದಿದೆ.
![](http://dtvkannada.in/wp-content/uploads/2022/01/IMG-20220101-WA0041.jpg)
ಗಾಯಗೊಂಡವನನ್ನು ಅಂಗಡಿ ಮಾಲಕ ಹುಸೇನ್ ಮಾಣಿ ಎಂದು ಗುರುತಿಸಲಾಗಿದೆ. ಗಾಯಾಳು ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಾಗಿದ್ದಾರೆ
ಹಲ್ಲೆಗೊಳಿಸಿದವರನ್ನು ಅಶ್ರಫ್ ಬುಡೋಳಿ, ಅನ್ವರ್ ಬುಡೋಳಿ, ಮತ್ತು ಕಾದರ್ ಬುಡೋಳಿ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ