ಕಾರವಾರ: ಚಲಿಸುತ್ತಿರುವ ರೈಲು ಬೋಗಿಯಿಂದ ರೈಲಿನ ಅಡಿಭಾಗಕ್ಕೆ ಆಯ ತಪ್ಪಿ ಬೀಳುತಿದ್ದ ಪ್ರಯಾಣಿಕನನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲ್ವೆ ಸಿಬ್ಬಂದಿ ನರೇಶ್ ಎಂಬವರಿಂದ ಅಪಾಯದಲ್ಲಿದ್ದ ಪ್ರಯಾಣಿಕನ ರಕ್ಷಣೆ ಮಾಡಲಾಗಿದೆ. ಪಂಚಗಂಗಾ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕನ ರಕ್ಷಣೆ ಮಾಡಲಾಗಿದೆ.
![](http://dtvkannada.in/wp-content/uploads/2022/01/IMG-20220109-WA0098-1024x576.jpg)
ಬೆಂಗಳೂರು ಮೂಲದ ಕೇಂದ್ರ ರಕ್ಷಣಾ ಇಲಾಖೆಯ ಅಧಿಕಾರಿ ಬಿ.ಎಂ. ದೇಸಾಯಿ ಎಂಬವರು ರಕ್ಷಣೆಗೊಳಗಾದ ವ್ಯಕ್ತಿ. ರೈಲಿನಲ್ಲಿ ಸೀಟು ಕಾದಿರಿಸಿ ತಮ್ಮ ಲಗೇಜು ತೆಗೆದುಕೊಳ್ಳಲು ರೈಲಿನಲ್ಲಿ ಇಳಿಯುವಾಗ ರೈಲು ಮುಂದೆ ಸಾಗಿದ್ದರಿಂದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ರಕ್ಷಣೆ ವಿಡಿಯೋವನ್ನು ಕೊಂಕಣ ರೈಲ್ವೆ ಇಲಾಖೆ ಬಿಡುಗಡೆಗೊಳಿಸಿದೆ.