ಬೆಳ್ತಂಗಡಿ: ಇಂದು ಬೆಳಿಗ್ಗೆ ಸುಮಾರು ಒಂಭತ್ತು ಗಂಟೆಯ ಸಮಯ ದರ್ಮಸ್ಥಳದ ಅನ್ನ ಛತ್ರದ ಬಳಿ ಗಾರೆ ಕೆಲಸವನ್ನು ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕಟ್ಟಡದಿಂದ ಕೆಳಗೆ ಬಿದ್ದು ಮೃತ ಪಟ್ಟ ದಾರುಣ ಘಟನೆ ಇಂದು ನಡೆದಿದೆ.
![](http://dtvkannada.in/wp-content/uploads/2022/01/IMG-20220114-WA0031.jpg)
ಮೃತಪಟ್ಟ ವ್ಯಕ್ತಿಯನ್ನು ವೇಣೂರು ಮುದ್ದಾಡಿ ನಿವಾಸಿ ದಿನೇಶ್(40) ಎಂದು ತಿಳಿದು ಬಂದಿದೆ.ಕಟ್ಟಡ ಕೆಲಸ ನಿರ್ವಹಿಸುವ ಕಾಯಕವನ್ನು ಹೊಂದಿದ್ದ ದಿನೇಶ್ ಇಂದು ಕೆಲಸ ನಿರ್ವಹಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.