ಉಪ್ಪಿನಂಗಡಿ: ರಾಜ್ಯದ್ಯಾಂತ ಓಮಿಕ್ರಾನ್ ಹಿನ್ನೆಲೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು ಆದರೆ ಜನ ಸಂಚಾರ ಮಾತ್ರ ಎಂದಿನಂತಿದೆ.
ಸರ್ಕಾರ ಇದೀಗಾಗಲೇ ಆಹಾರೇತರ ಎಲ್ಲಾ ಮಳಿಗೆಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದು.
ಬೀದಿ ಬದಿ ವ್ಯಾಪಾರ, ಸರ್ಕಾರಿ ಕಚೇರಿಗಳಿಗೆ ಅನುಮತಿ ನೀಡಿದೆ.
ಆದರೆ ಡ್ರೆಸ್, ಫ್ಯಾನ್ಸಿ, ಫರ್ನಿಚರ್ ಇನ್ನಿತರ ಆಹಾರೇತರ ಮಳಿಗೆಗಳನ್ನು ಬಂದ್ ಮಾಡಿಸಿದ್ದು ವೀಕೆಂಡ್ ಕರ್ಫ್ಯೂ ಅಷ್ಟಕ್ಕೇ ಮಾತ್ರವೇ ಸೀಮಿತವಾಗಿದೆ.
ಉಪ್ಪಿನಂಗಡಿಯಲ್ಲಿ ಅಂಗಡಿ ಬಂದ್ ಗಷ್ಟೇ ಕರ್ಫ್ಯೂ ಸೀಮಿತವಾಗಿದೆ.
ಜನ ಸಂಚಾರ ಮಾತ್ರ ಎಂದಿನಂತಿತ್ತು.
ಅಂಗಡಿ ಮಾಲೀಕರು ಈ ಕರ್ಫ್ಯೂ ಮೂಲಕ ಸರ್ಕಾರ ಗಳಿಸಿದಾದರು ಏನು ಎಂದು ಪ್ರಶ್ನಿಸಿದ್ದಾರೆ.!
ಕೇವಲ ಜವಳಿ ಅಂಗಡಿ, ಫ್ಯಾನ್ಸಿ ಶಾಪ್ ಗೆ ಅಷ್ಟೇ ಕರ್ಫ್ಯೂ ನ ಎಂದು ಪ್ರಶ್ನಿಸಿದ್ದಾರೆ.
ಅಂತೂ ಸರ್ಕಾರ ಆದೇಶ ಹೊರಡಿಸಿದ ವೀಕೆಂಡ್ ಕರ್ಫ್ಯೂ ದಿಕ್ಕಿಲ್ಲದಂತಾಗಿದೆ. ವೀಕೆಂಡ್ ಕರ್ಫ್ಯೂ ಕಾರಣ ಬಡ ಮತ್ತು ಮಧ್ಯಮ ವರ್ಗದವರಿಗೆ ತೊಂದರೆಯಾಗಿದ್ದು ಮಾತ್ರ ಸುಳ್ಳಲ್ಲ.