dtvkannada

ಮೈಸೂರು: ಎರಡು ಮಕ್ಕಳ ತಾಯಿಯ ಜೊತೆ ಸ್ನೇಹ ಹೊಂದಿರುವ ಆರೋಪ ಹಿನ್ನೆಲೆ ಗ್ರಾಮಸ್ಥರು ಯುವಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಹಳ್ಳಿದಿಡ್ಡಿ ಗ್ರಾಮದಲ್ಲಿ ನಡೆದಿದೆ. ಮಹೇಶ್‌ ಕುಮಾರ್‌ ಹಲ್ಲೆಗೆ ಒಳಗಾದ ಯುವಕ.

ವಿವಾಹಿತ ಮಹಿಳೆ ಜತೆ ಸ್ನೇಹ ಬೆಳೆಸಿದ ಹಿನ್ನೆಲೆ ನಂಜನಗೂಡು ತಾಲೂಕಿನ ಹಳ್ಳಿದಿಡ್ಡಿ ಗ್ರಾಮದಲ್ಲಿ ಯುವಕನಿಗೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಸದ್ಯ ಗಾಯಾಳು ಮಹೇಶ್‌ ಕುಮಾರ್‌ಗೆ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಪ್ರಿಯತಮೆಯ ಮೂಲಕ ಪ್ರಿಯತಮನನ್ನ ಗ್ರಾಮಕ್ಕೆ ಕರೆಸಿಕೊಂಡ ಸ್ಥಳೀಯರು ಗ್ರಾಮಕ್ಕೆ ಬರುತ್ತಿದ್ದಂತೆ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಯುವಕ ಮಹೇಶ್, ಮಹಿಳೆಯ ಮದುವೆ ಆಗುವ ಮುಂಚಿನಿಂದಲೂ ಸ್ನೇಹ ಹೊಂದಿದ್ದ. ಮಹಿಳೆ ಮದುವೆಯಾಗಿ ಎರಡು ಮಕ್ಕಳಾದ್ರು ಇವರ ಸ್ನೇಹ ಹಾಗೇ ಇತ್ತು. ಮಹೇಶ್ ಆಗಾಗ ಮಹಿಳೆಯ ಮನೆಗೆ ಬಂದು ಹೋಗುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ಸದ್ಯ ಈ ವಿಚಾರ ಆಕೆಯ ಪತಿಗೆ ತಿಳಿದಿದೆ. ನಂತರ ಯುವಕನಿಗೆ ಬುದ್ದಿ ಕಲಿಸಲು ನಿರ್ಧಾರ ಮಾಡಿ ಗ್ರಾಮಸ್ಥರ ಸಹಾಯದಿಂದ ಹೊಡೆಸಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

By dtv

Leave a Reply

Your email address will not be published. Required fields are marked *

error: Content is protected !!