ಪುತ್ತೂರು: ಕೆಯ್ಯೂರು ನೆಟ್ಟಾಲದಿಂದ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ರಿಕ್ಷಾ ಮತ್ತು ಜೀಪು ನಡುವೆ ಅಪಘಾತ ಸಂಭವಿಸಿದ ಘಟನೆ ಪೊಯ್ಯೊಲೆಯಲ್ಲಿ ಜ.29ರಂದು ಬೆಳಗ್ಗೆ ನಡೆದಿದೆ.
ಜೀಪು ಚಾಲಕ ಕಣಿಯಾರು ಚಂದ್ರಶೇಖರ ಪೂಜಾರಿ ಜೀಪು ಚಲಾಯಿಸುತ್ತಿದ್ದು, ರಿಕ್ಷಾ ಚಾಲಕ ಎತ್ಯಡ್ಕ ಗಿರಿಧರ ಹಾಗೂ ರಿಕ್ಷಾದಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು.
ರಿಕ್ಷಾದಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದು ಅವರುನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಗಾಯಾಳುವನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆಯೆಂದು ತಿಳಿದು ಬಂದಿದೆ.