ಬಿ.ಸಿ ರೋಡ್:- ಬಟ್ಟೆ ಅಂಗಡಿಯನ್ನು ತಡವಾಗಿ ಬಾಗಿಲು ತೆರೆದಕ್ಕೆ ಆಕ್ರೋಶಿತನಾದ ಮಾಲಿಕ ತನ್ನ ಸಿಬ್ಬಂದಿಗೆ ಕೈಗೆ ಸಿಕ್ಕಿದ ವಸ್ತುಗಳಿಂದ ಹಲ್ಲೆ ಮಾಡಿ, ಚೂರಿಯಿಂದ ಇರಿದ ಘಟನೆ ಮೆಲ್ಕಾರ್ ನಲ್ಲಿ ಇಂದು ನಡೆದಿದೆ.
ಚೂರಿಕ್ಕಿಳಿತಕ್ಕೊಳಗಾದ ವ್ಯಕ್ತಿಯನ್ನು ಸದಕತುಲ್ಲಾ ಎಂದು ಗುರುತಿಸಲಾಗಿದೆ.
ಎಂದಿಗಿಂತ ಸ್ವಲ್ಪ ತಡವಾಗಿ ಅಂಗಡಿಯ ಬಾಗಿಲು ತೆರೆಯುತ್ತಿದ್ದ ಸದಕತುಲ್ಲಾ ರವರಿಗೆ, ಮಾಲೀಕ ನಿಸಾರ್ ಎಂಬವರು “ಏಕೆ ತಡವಾಗಿ ಶಾಪ್ ಓಪನ್ ಮಾಡುತ್ತಿದ್ದಿ” ಎಂದು ಗದರಿಸಿ ಕೈಗೆ ಸಿಕ್ಕ ಹರಿತವಾದ ಆಯುಧದಿಂದ ಸಿಬ್ಬಂದಿಯ ಕಣ್ಣು, ಕೈ, ಮುಖಕ್ಕೆ ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.