ಪುತ್ತೂರು: 2020-21 ನೆ ಸಾಲಿನಲ್ಲಿ
ಸ. ಹಿ.ಪ್ರಾ.ಶಾಲೆ ಒಡ್ಯ 8ನೇ ತರಗತಿ ಓದುತ್ತಿದ್ದ ಅರ್ಚನಾ ಇನ್ಸ್ಪಯಾರ್ ಅವಾರ್ಡ್ ವಿಜ್ಞಾನ ಮಾದರಿ ಸ್ಪರ್ಧೆಗೆ ಆಯ್ಕೆಯಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿ ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
![](http://dtvkannada.in/wp-content/uploads/2022/02/IMG-20220214-WA0054-838x1024.jpg)
ಈ ವಿದ್ಯಾರ್ಥಿನಿ ತಯಾರಿಸಿದ ಮಾದರಿ ವಿಶೇಷ ಪಾದರಕ್ಷೆ ಮಾದರಿಯನ್ನು ಒಡ್ಯ ಶಾಲಾ ವಿಜ್ಞಾನ ಶಿಕ್ಷಕಿ ಕು.ದಿವ್ಯಾ ಇವರ ಮಾರ್ಗದರ್ಶನದಲ್ಲಿ ತಯಾರಿಸುತ್ತಾರೆ.ಇದೀಗ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುವುದು ಹೆಮ್ಮೆಯ ವಿಷಯವಾಗಿದೆ.
ಈಕೆ ಶಾಲಾ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರಾದ ಶ್ರೀಕೃಷ್ಣ ಭಟ್ ಮತ್ತು ಲತಾ ಎಸ್ ಭಟ್ ಇವರ ಪುತ್ರಿ. ಗಡಿ ನಾಡ ಗ್ರಾಮದ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿನಿಯನ್ನು ಶಾಲಾ ಪರವಾಗಿ ಅಭಿನಂದಿಸಲಾಯಿತು ಎಂದು ಶಾಲಾ ಮುಖ್ಯ ಶಿಕ್ಷಕ ಉಸ್ಮಾನ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪ್ರಸ್ತುತ ಈಕೆ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾಳೆ.