dtvkannada

ಪುತ್ತೂರು: ರಾಜ್ಯದಾದ್ಯಂತ ಭಾರೀ ಚರ್ಚೆಯಾಗುತ್ತಿರುವ
ಹಿಜಾಬ್ ವಿವಾದ ಇದೀಗ ದಕ್ಷಿಣ ಕನ್ನಡ ಕೆಲವು ಕಡೆ ಆವರಿಸಿದ್ದು ಇದೀಗ ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜೊಂದಕ್ಕೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರ ತಡೆದಿದ್ದಾರೆ.

ಹಿಜಾಬ್ ಧರಿಸಿ ತರಗತಿಯೊಳಗೆ ಪ್ರವೇಶ ನೀಡಲು ಕಾಲೇಜು ಪ್ರಾಂಶುಪಾಲರು ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನೀಯರು ತರಗತಿ ಬಹಿಸ್ಕರಿಸಿ ಹೊರನಡೆದಿದ್ದಾರೆ. ಇದನ್ನು ನೋಡಿದ ಕೆಲವು ವಿದ್ಯಾರ್ಥಿಗಳು ಅವರಿಗೆ ಹಿಜಾಬ್ ಧರಿಸಿ ತರಗತಿಯಲ್ಲಿ ಕೂರಲು ಅವಕಾಶ ನೀಡಬೇಕೆಂದು ಕಾಲೇಜು ಆಡಳಿಯವರೊಂದಿಗೆ ಕೇಳಿಕೊಂಡಿದ್ದು ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಕೂಡಲೆ ಸ್ಥಳಕ್ಕೆ ಪೋಲಿಸರು ಆಗಮಿಸಿ ಪರಿಸ್ಥಿತಿ ಕೈಮೀರದಂತೆ ತಿಳಿಸಿಗೊಳಿಸಿದ್ದಾರೆ.

ಹಿಜಾಬ್ ವಾರ್ ಮತ್ತೆ ಮುಂದುವರಿಯದಂತೆ ತಡೆಯಲು ಇದೀಗ ಪುತ್ತೂರಿನ ಪ್ರಥಮ ದರ್ಜೆ ಕಾಲೇಜ್ ಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!