ಪುತ್ತೂರು: ಮಶಾಯಿಖರು ಮಾರ್ಗದರ್ಶಿಗಳು ಎಂಬ ವಿಷಯದಲ್ಲಿ ಕೇರಳ ಕರ್ನಾಟಕದಲ್ಲಿ ಖಾದಿಮುಸುನ್ನ ಝಾವಿಯತುಸೂಫಿಯ ಅಧೀನ ನಡೆಯುತ್ತಿರುವ ಸೂಫಿ ಪ್ರವಚನ ಮಾರ್ಚ್ 10 ಗುರುವಾರ ಸಂಜೆ ಪುತ್ತೂರಿನ ಕುಂಬ್ರದ ಅಬ್ರಾಡ್ ಹಾಲ್ ಮುಂಭಾಗ ಸೂಫಿ ಮತ ಪ್ರವಚನ ನಡೆಯಲಿದೆ.
ಅಬ್ದುಲ್ ಸಮದ್ ಅನ್ವರಿ ಉದ್ಘಾಟಿಸಿ ಬಹು ಅಹ್ಸನಿ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ದೀನೀ ಪ್ರೇಮಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.