ಕೊಪ್ಪಳ: ಮದುವೆ ನಿಶ್ಚಿತಾರ್ಥಕ್ಕೆಂದು ಹೊರಟ್ಟಿದ್ದ ಕುಟುಂಬದ ಟ್ರ್ಯಾಕ್ಟರೊಂದು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
![](http://dtvkannada.in/wp-content/uploads/2022/03/IMG-20220311-WA0017.jpg)
ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಯಮನೂರಪ್ಪ ಸಿಂಧನೂರು(55), ಅಂಬಮ್ಮ (45), ದ್ಯಾವಮ್ಮ (60), ಶೇಶಪ್ಪ ಬಂಡಿ (40)ಅಸುನೀಗಿದ್ದಾರೆ.
ಮೃತಪಟ್ಟ ವ್ಯಕ್ತಿಗಳು ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದ ಇಂದಿರಾಗಾಂಧಿ ನಿವಾಸಿಗಳಾಗಿದ್ದು, ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿಯ ರೈಸ್ ಟೆಕ್ನಾಲಜಿ ಪಾರ್ಕ್ ಬಳಿ ಈ ದುರ್ಘಟನೆ ಸಂಭವಿಸಿದೆ.
![](http://dtvkannada.in/wp-content/uploads/2022/03/IMG-20220311-WA0016.jpg)
ಕಾರಟಗಿ ಪಟ್ಟಣದ 18ನೇ ವಾರ್ಡಿನ ನಿವಾಸಿಗಳು ನಿಶ್ಚಿತಾರ್ಥಕ್ಕೆಂದು ಕಾರಟಗಿಯಿಂದ ಕನಕಗಿರಿಗೆ 25ಕ್ಕೂ ಹೆಚ್ಚು ಮಂದಿ ಟ್ಯಾಕ್ಟರ್ ನಲ್ಲಿ ಹೊರಟಿದ್ದರು. ಈ ಸಂದರ್ಭ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಉಳಿದಂತೆ ನಾಲ್ವರ ಸ್ಥಿತಿ ಗಂಭಿರವಾಗಿತ್ತು.ಉಳಿದ ಇಬ್ಬರು ಮತ್ತೆ ಮೃತಪಟ್ಟಿದ್ದು ಗಾಯಾಳುಗಳನ್ನು ಕಾರಟಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಸೇರಿದಂತೆ ಕನಕಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
![](http://dtvkannada.in/wp-content/uploads/2022/03/f70891a6-e711-4222-b18b-ee2d8afe6859-682x1024.jpg)