dtvkannada

ಸುಳ್ಯ: ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ವತಿಯಿಂದ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಶಿಕ್ಷಣ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವು ಜರುಗಿತು.

ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಜ್ಯೋತಿಷಿ ಮತ್ತು ಸಾಹಿತಿ ಎಚ್ .ಭೀಮರಾವ್ ವಾಷ್ಠರ್ ರವರು ಅಧ್ಯಕ್ಷತೆ ವಹಿಸಿದ್ದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಉಮಾ ರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಧಕ ಮಹಿಳೆಯರಾದ ಝಕೀರಾ ಷರೀಫ್ ಮತ್ತು ಶ್ರೀಮತಿ ಲತಾ ಪ್ರಸಾದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗಾಯಕರಾದ ಹರ್ಷಿತಾ ಕೆ ಎಸ್ ಸುಳ್ಯ, ಶೀಲಾ ಪಡೀಲ್ ಮಂಗಳೂರು, ಫಾತಿಮತ್ ಜೈಬಾ ಮತ್ತು ಸ್ನಿಗ್ಧ ಎನ್ ಎಸ್ ಸುಳ್ಯ ರವರು ದೇವಿಯ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ರಮ್ಲತ್ ಬೀಬಿ ರಶೀದ್ ರವರು ಮಹಿಳಾ ಕಾನೂನು ವಿಚಾರವಾಗಿ ಮಾತನಾಡಿದರು.

ನಾರಿಯ ಬದುಕು ಎಂಬ ವಿಷಯ ಕುರಿತ ಕವಿಗೋಷ್ಠಿಯಲ್ಲಿ ಪೂರ್ಣಿಮಾ ಪೆರ್ಲಂಪಾಡಿ , ಪರಿಮಳ ಐವರ್ನಾಡು, ಸುಮಂಗಲಾ ಲಕ್ಷ್ಮಣ್ , ಶ್ರೀಮತಿ ಭಾರತಿ ಜಯನಗರ, ಅಪೂರ್ವ ಕಾರಂತ್ ಪುತ್ತೂರು, ವಿಭಾ ಭಟ್ ಮತ್ತು ಸೌಮ್ಯ ಸಿ ಡಿ ಸುಳ್ಯ ರವರು ಸ್ವರಚಿತ ಕವನಗಳನ್ನು ವಾಚನ ಮಾಡಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹ ಸಂಚಾಲಕರಾದ ಬಿ ಕೆ ಉಮೇಶ್ ಆಚಾರ್ಯ ಜಟ್ಟಿಪಳ್ಳ ರವರು ಪ್ರಾಸ್ತಾವಿಕ ಮಾತನಾಡಿದರು. ಪರಿಮಳ ಐವರ್ನಾಡು ಸ್ವಾಗತಿಸಿದರು . ಚಂದನ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಮಂಗಲಾ ಲಕ್ಷ್ಮಣ್ ಕೋಳಿವಾಡ ರವರು ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಪತ್ರಕರ್ತ ರಶೀದ್ ಬೆಳ್ಳಾರೆ ಸಹಕರಿಸಿದರು. ಲೀಲಾವತಿ ದೇವರಗುಂಡ ಮತ್ತು ಪುಷ್ಪಾವತಿ ರವರು ಉಪಸ್ಥಿತರಿದ್ದರು .

By dtv

Leave a Reply

Your email address will not be published. Required fields are marked *

error: Content is protected !!