ಪುತ್ತೂರು: ನಿನ್ನೆ ಮುಂಜಾನೆ ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪುತ್ತೂರು ಕೂರ್ನಡ್ಕದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಮೃತಪಟ್ಟಿದ್ದಾನೆ.
![](http://dtvkannada.in/wp-content/uploads/2022/03/5314252c-11cd-4bf2-991e-f8b014aa0f48-1024x916.jpg)
ಮೃತ ಯುವಕನನ್ನು ಕೂರ್ನಡ್ಕ ನಿವಾಸಿ ಉಸ್ಮಾನ್ ಎಂಬವರ ಪುತ್ರ ಆಶಿಕ್ ಸುನೈಫ್(21) ಎಂದು ತಿಳಿದು ಬಂದಿದೆ. ಪುತ್ತೂರಿನ ಬಸ್ ನಿಲ್ದಾನದ ಬಳಿ ಇರುವ ಬ್ಯಾಗ್ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
![](http://dtvkannada.in/wp-content/uploads/2022/03/abf9ac78-8ee2-4c0f-9281-c95535aa2651-1024x485.jpg)
ಘಟನೆಯ ವಿವರ: ಮೊನ್ನೆ ರಾತ್ರಿ ಕೆಲಸ ಮುಗಿಸಿ ತನ್ನ ಸ್ನೇಹಿತ ಕೂರ್ನಡ್ಕದ ರವೂಫ್ ಜೊತೆ ಆಕ್ಟೀವಾದಲ್ಲಿ ಬೆಂಗಳೂರು ಕಡೆ ಹೊರಟಿದ್ದ. ಮೈಸೂರು ರಸ್ತೆಯ ರಾಮನಗರ ಎಂಬಲ್ಲಿ ಸವಾರನ ನಿಯಂತ್ರಣ ತಪ್ಪಿದ ಆಕ್ಟೀವಾ ಡಿವೈಡರ್’ಗೆ ಡಿಕ್ಕಿಯಾಗಿದೆ.
![](http://dtvkannada.in/wp-content/uploads/2022/03/02c729c0-4572-4b41-91c3-84dd2548fc49.jpg)
ಡಿಕ್ಕಿಯ ರಭಸಕ್ಕೆ ಸವಾರ ಸುನೈಫ್ ರಸ್ತೆಗೆಸಯಲ್ಪಟ್ಟು, ಗಂಭೀರ ಸ್ವರೂಪದ ಗಾಯಗೊಂಡಿದ್ದ. ಕೂಡಲೇ ಸ್ಥಳೀಯ ಪೊಲೀಸರ ಸಹಾಯದಿಂದ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಹಿಂಬದಿ ಸವಾರ ರವೂಫ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಷಯ ತಿಳಿದು ಸಂಬಂಧಿಕರು ಬೆಂಗಳೂರು ಕಡೆ ಹೊರಟಿದ್ದಾರೆ