ಪುತ್ತೂರು: ಕುಂಬ್ರ ವರ್ತಕ ಸಂಘದ ಹಿರಿಯ ಸದಸ್ಯರಾದ ಅರಿಯಡ್ಕ ಗ್ರಾಮದ ಕೋರಿಕ್ಕಾರು ಪಯಂದೂರು ನಿವಾಸಿ ಸುಂದರ ಪೂಜಾರಿ (81) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಮಾ.25 ರಂದು ಸ್ವಗ್ರಹದಲ್ಲಿ ನಿಧನರಾದರು.
![](http://dtvkannada.in/wp-content/uploads/2022/03/IMG-20220325-WA0014.jpg)
ಮೃತರು ಪತ್ನಿ ಹಾಗೂ ಇರ್ವರು ಪುತ್ರಿಯರನ್ನು ಮತ್ತು ಪುತ್ರರನ್ನು ಅಗಲಿದ್ದಾರೆ.
![](http://dtvkannada.in/wp-content/uploads/2022/03/IMG-20220325-WA0013.jpg)
ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಂಬ್ರ ಪೇಟೆಯ ಸುತ್ತಮುತ್ತಾ ಇಂದು ಮಧ್ಯಾಹ್ನ ಅರ್ಧ ಗಂಟೆಯ ಕಾಲ ಎಲ್ಲಾ ವರ್ತಕರು ತಮ್ಮ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಮೃತರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ವರ್ತಕರ ಸಂಘ (ರಿ) ಕುಂಬ್ರ ಪ್ರಕಟನೆಯಲ್ಲಿ ತಿಳಿಸಿದೆ.