dtvkannada

ನೆಲ್ಯಾಡಿ: ಕಳೆದ ರಾತ್ರಿ ಅಂಗಡಿ ಬಂದ್ ಮಾಡಿ ತಾನು ಸಾಕುತ್ತಿದ್ದ ಕರುವಿನೊಂದಿಗೆ ತೆರಳುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರಾದ ಕೊಕ್ಕಡ ಮೂಲದ ಮಹೇಶ್ ಹಾಗೂ ಆತನ ಸಂಗಡಿಗರು ಅಡ್ಡಗಟ್ಟಿ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಮಾಂಗಲ್ಯ ಸರವನ್ನು ಕಿತ್ತು ಮಾನಭಂಗಕ್ಕೆ ಯತ್ನಿಸಿದಲ್ಲದೆ ಜೊತೆಗಿದ್ದ ಅವರ ಕೆಲಸಗಾರನ ಮೇಲೂ ಹಲ್ಲೆ ನಡೆಸಿದ ಪ್ರಕರಣ ನೆಲ್ಯಾಡಿಯ ಪೆರಿಯಶಾಂತಿಯಲ್ಲಿ ನಡೆದಿದ್ದು,
ಈ ವಿಚಾರವನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸಿದೆ.

ಕರುವಿನ ಮೇವು ಮುಗಿಸಿ ತನ್ನ ಕೆಲಸದವನವೊಂದಿಗೆ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾಗ ಈ ಘಟನೆ ನಡೆದಿದ್ದು.
ಎರಡು ಕಾರುಗಳಲ್ಲಿ ಬಂದ ಕೊಕ್ಕಡದ ಬಜರಂಗದಳದ ಕಾರ್ಯಕರ್ತರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಕೆಲಸದವನ ಮತ್ತು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದು ಮಹಿಳೆಯ ಮಾಂಗಲ್ಯ ಮತ್ತು ವಸ್ತ್ರವನ್ನು ಎಳೆದು ಮಾನ ಭಂಗ ಮಾಡಿದ್ದರು.

ಇದೀಗ ಸಂತ್ರಸ್ತೆಯು ನೆಲ್ಯಾಡಿಯ ಆಸ್ಪತ್ರೆಗೆ ದಾಖಲಾಗಿದ್ದು, ಎಸ್‌ಡಿಪಿಐ ನೆಲ್ಯಾಡಿ ಬ್ಲಾಕ್ ನೇತೃತ್ವದ ನಾಯಕರ ನಿಯೋಗವು ಸಂತ್ರಸ್ತೆಯನ್ನು ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಮುಖಂಡರಾದ ಹನೀಫ್ ನೆಲ್ಯಾಡಿ, ರಝಾಕ್ ಕೋಲ್ಪೆ, ಹಸನ್ ಹೊಸಮಜಲು, ಸಮದ್ ನೆಲ್ಯಾಡಿ, ಮುಸ್ತಫಾ ದೊಂತಿಲ ಉಪಸ್ಥಿತರಿದ್ದರು.

Dtv YouTube

By dtv

Leave a Reply

Your email address will not be published. Required fields are marked *

error: Content is protected !!