ಪುತ್ತೂರು: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ನಡೆಸಿ ಮಾಂಸ ಹಾಗೂ ಓರ್ವನನ್ನು ಬಂದಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೆದಿಲ ಗ್ರಾಮದಲ್ಲಿ ನಡೆದಿದೆ.
ಹಿಂದೂ ಜಾಗರಣ ವೇದಿಕೆಯ ಮಾಹಿತಿ ಮೇರೆಗೆ ನಿನ್ನೆ( ಸೋಮವಾರ) ಸಂಜೆ ದಾಳಿ ನಡೆಸಿದ ಪುತ್ತೂರು ಠಾಣಾ ಪೊಲೀಸರು ಅಕ್ರಮ ಗೋ ವದೆ ಮಾಡಿ ಮಾಂಸ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ್ದಾರೆ.
ದಾಳಿ ವೇಳೆ ಸ್ಥಳದಲ್ಲಿದ್ದ ಇನ್ನೊರ್ವ ಪರಾರಿಯಾಗಿದ್ದಾನೆ.
ಸುಮಾರು 70 ರಿಂದ 80 ಕೆ.ಜಿಯಷ್ಟು ದನದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.